Pavitra Gowda: ದರ್ಶನ್ ಜೊತೆ ಸಂಪರ್ಕ ಹೇಗಾಯ್ತು, ತಮ್ಮಿಬ್ಬರ ಸಂಬಂಧ ಏನು? ಕಂಪ್ಲೀಟ್ ಆಗಿ ಎಲ್ಲವನ್ನೂ ಬಾಯ್ಬಿಟ್ಟ ಪವಿತ್ರ ಗೌಡ

Pavitra Gowda: ರಾಜ್ಯದ ಯಾವ ಮಾಧ್ಯಮ, ಪತ್ರಿಕೆ ನೋಡಿದರೂ ಬರೀ ಅದೇ ಸುದ್ದಿ. ಇಡೀ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರೇ ತಲೆ ತಗ್ಗಿಸುವಂತಹ ಅವಮಾನಕರ ಸುದ್ದಿ. ಕನ್ನಡಿಗರು ಮನೆ ಮಗನೆಂದು ಮೆರೆಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Actor Darshan)ಅವರು ಅದೇ ಕನ್ನಡಿಗರ ಹೆಸರಿಗೆ ಮಸಿ ಬಳಿದ ಸುದ್ದಿ. ಹೌದು, ರೇಣುಕಾ ಸ್ವಾಮಿ ಹತ್ಯೆ ಪ್ರಕರಣ(Renuka Swamy Murder Case) ಇಡೀ ನಾಡು ನಾಚಿಕೆ ಪಡುವಂತಹ ಸುದ್ದಿಯಾಗಿ ಹಬ್ಬಿ ಗಬ್ಬೆಬ್ಬಿಸುತ್ತಿದೆ.

ಇಷ್ಟೆಲ್ಲಾ ರಾದ್ಧಾಂತಕ್ಕೆ ಮೂಲ ಕಾರಣ ಆ ಮಾಯಂಗನೆ ಪವಿತ್ರ ಗೌಡ(Pavitra gowda). ಒಬ್ಬ ನಟನನ್ನು ಹೇಗೆಲ್ಲಾ ಯೂಸ್ ಮಾಡಿಕೊಳ್ಳಬೇಕೋ ಹಾಗೆಲ್ಲಾ ಯೂಸ್ ಮಾಡಿಕೊಂಡು ಕೊನೆಗೆ ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದ ಪುಣ್ಯಾತ್ಗಿತ್ತಿ ಆಕೆ. ಸೌಂದರ್ಯದ ಗಣಿಯೇ ನಾನು ಎಂದು ಮೆರೆಯುತ್ತಿದ್ದ ಈ ಲಲಲಾಮಣಿಯ ಸೊಕ್ಕು ಈಗ ಹೇಗೆ ಮುರಿಯುತ್ತಿದೆ ಎಂದು ನೋಡುತ್ತಿದ್ದೇವೆಲ್ಲಾ. ಅದೂ ಅಲ್ಲದೆ ಇದೀಗ ಈ ದೊಡ್ಡ ಕಿಲ್ಲಿಂಗ್ ಗ್ಯಾಂಗಿನ ಜಾತಕ ರೆಡಿಯಾಗಿದೆ. ಅದು ಕೋರ್ಟ್ ಗೂ ತಲುಪಿದೆ. ಈ ಚಾರ್ಜ್ ಶೀಟ್ ನಲ್ಲಿ ಹಲವು ಸತ್ಯಗಳು ಬಯಲಾಗಿವೆ. ಅಂತೆಯೇ ಮಾಯಾಂಗನೆ ಪವಿತ್ರ ಗೌಡ ತಾನು, ದರ್ಶನ್ ಹೇಗೆ ಪರಿಚಯವಾದೆವು ಎಂದು ಹೇಳಿದ್ದಾಳೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ

ಯಾರಿದು ಪವಿತ್ರಾ ಗೌಡ?
ಪವಿತ್ರಾ ಗೌಡ ಅವರು ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿ ಕಿತಾಬು ಇವರ ಜನಪ್ರಿಯ ಸಿನಿಮಾ. ಬತಾಸ್‌, ಛತ್ರಿಗಳು ಸಾರ್‌ ಛತ್ರಿಗಳು ಚಿತ್ರದಲ್ಲಿ ನಟಿಸಿದ್ದಾರೆ. ಈಕೆ ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದರೂ ಹೇಳಿಕೊಳ್ಳುವಂತಹ ನಟಿಯಲ್ಲಾ ಬಿಡಿ. ಈಕೆ ಮೂಲತಃ ಬೆಂಗಳೂರಿನ ಜೆಪಿ ನಗರದಾಕೆ. ಅವಕಾಶಕ್ಕಾಗಿ ಅಡ್ಡಾಡ್ತಿದ್ದ ಕಾಲದಲ್ಲಿಯೇ ಸ್ಕೋಡಾ ಕಾರಿನಲ್ಲೇ ಸವಾರಿ ಮಾಡುತ್ತಿದ್ದ ಪವಿತ್ರಳ ತಂದೆ ಬಿಲ್ಡರ್ ಎಂಬ ಮಾಹಿತಿಗಳಿವೆ.

ಅಂದಹಾಗೆ ಪದವಿ ಮುಗಿಯುತ್ತಲೇ ಮಾಡೆಲ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಹಾಕಲಾರಂಭಿಸಿ ಮಾಡೆಲಿಂಗ್ ಜಗತ್ತಿಗೆ ಅಡಿಯಿರಿಸಿದಳು. ಆಕ್ಟೀವ್ ಆಗಿರುವ ಈ ಹುಡುಗಿ ಬಲು ಬೇಗನೆ ಆ ವಲಯದ ಎಲ್ಲರ ಗಮನ ಸೆಳೆದಳು. ಈ ಸುಂದರಿ ಅತೀ ಕಡಿಮೆ ಅವಧಿಯಲ್ಲೇ ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದಳು. ನಂತರ ಕಾಡಿ ಬೇಡಿ ನಟನೆಗೂ ಬಂದುಬಿಟ್ಟಳು. ನಟಿಸಿದ ಸಿನಿಮಾಗಳು ಹೆಚ್ಚು ಮಕಾಡೆ ಮಲಗಿದವು.

ಇವಳು ನಟಿ ಆದರೂ ನಟನೆಗಿಂತ ದರ್ಶನ್‌ ಜತೆಗಿನ ಸಂಬಂಧದ ವಿಷಯದಲ್ಲೇ ಸುದ್ದಿಯಲ್ಲಿದ್ದದ್ದು ಹೆಚ್ಚು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಮನ್‌ ಫ್ರೆಂಡ್‌ವೊಬ್ಬರ ನೆರವಿನಿಂದ ದರ್ಶನ್‌ ಮತ್ತು ಪವಿತ್ರಾ ಗೌಡ ಪರಿಚಯವಾಗಿತ್ತು ಎಂದು ಹೇಳಲಾಗಿದೆ. ದರ್ಶನ್‌ ಶೂಟಿಂಗ್‌ ಸೆಟ್‌ನಲ್ಲೂ ಪವಿತ್ರಾ ಗೌಡ ಆಗಾಗ ಕಾಣಿಸುತ್ತಿದ್ದರು. ಮೈಸೂರಿನ ಹೋಟೆಲ್‌ ಗಲಾಟೆ ವಿಷಯದಲ್ಲೂ ಪವಿತ್ರಾ ಗೌಡ ಹೆಸರು ಕೇಳಿಬಂದಿತ್ತು.

ದರ್ಶನ್‌ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ?
ಚಾರ್ಜ್ ಶೀಟ್ ನಲ್ಲಿ ಪವಿತ್ರ ಗೌಡ ಹೇಳಿಕೆಯನ್ನು ನೋಡುವುದಾದರೆ ‘2014ರಲ್ಲಿ ಬುಲ್ ಬುಲ್ ಚಿತ್ರದ ಆಡಿಷನ್‌ಗೆ ಹೋಗಿದ್ದಾಗ ನನ್ನ ಮಾಡೆಲಿಂಗ್‌ ಪ್ರೊಫೈಲನ್ನು ದರ್ಶನ್ ಅವರಿಗೆ ಷೇರು ಮಾಡಿ ಅವರೊಂದಿಗೆ ಮಾತನಾಡಲು ಅವರ ಮೊಬೈಲ್ ನಂಬರ್‌ ಅನ್ನು ಪರಿಚಿತ ಮ್ಯಾನೇಜರ್ ಅವರಿಂದ ಪಡೆದುಕೊಂಡಿದ್ದೆ. ಈ ವಿಚಾರವಾಗಿ ದರ್ಶನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಬುಲ್ ಬುಲ್ ಚಿತ್ರಕ್ಕೆ ಈಗಾಗಲೇ ಆಡಿಷನ್ ಮುಗಿದಿದೆ. ಬೇರೆ ಯಾವುದಾದರೂ ಚಿತ್ರಕ್ಕೆ ಅವಶ್ಯಕತೆಯಿದ್ದರೆ ತಿಳಿಸುವುದಾಗಿ ಹೇಳಿದ್ದರು. ನಂತರ ಇದನ್ನೆ ನೆಪವಾಗಿಟ್ಟುಕೊಂಡು ಪ್ರತಿದಿನ ದರ್ಶನ್‌ ಅವರಿಗೆ ಫೋನ್‌ನಲ್ಲಿ, ವಾಟ್ಸಪ್‌ನಲ್ಲಿ ಚಾಟಿಂಗ್‌ ಮತ್ತು ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೆವು. ನಂತರ ಆಗಾಗ್ಗೆ ಭೇಟಿ ಮಾಡುತ್ತಿದೆ ಎಂದು ಪವಿತ್ರಾಗೌಡ ಸ್ವಇಚ್ಛಾ ಹೇಳಿಕೆ ನೀಡಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ದರ್ಶನ್ ಸಂಬಂಧದ ಬಗ್ಗೆ ಪವಿತ್ರ ಗೌಡ ಹೇಳಿದ್ದೇನು?
ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಪವಿತ್ರ ‘ನಾನು ಮತ್ತು ದರ್ಶನ್‌ (Darshan) ಸಲುಗೆಯಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು. ದರ್ಶನ್ ಅವರು ವಿಜಯಲಕ್ಷ್ಮಿ ಅವರೊಂದಿಗೆ ಮದುವೆಯಾಗಿ ಮಗ ಇರುವುದು ಮೊದಲು ಗೊತ್ತಿರಲಿಲ್ಲ, ನಂತರ ತಿಳಿಯಿತು. ನಾವು ವಾಸ ಮಾಡುತ್ತಿದ್ದ ಜೆ.ಪಿ ನಗರದ ಮನೆಗೆ ದರ್ಶನ್ ಬರುತ್ತಿದ್ದರು. ಆಗಾಗ್ಗೆ ನಾವು ಲಾಂಗ್ ಡ್ರೈವ್ ಹೋಗುತ್ತಿದ್ದೆವು. ನಾನು, ನನ್ನ ಮಗಳು ಹಾಗೂ ದರ್ಶನ್‌ ಮೂವರು ವಾಸ ಮಾಡೋದಕ್ಕಾಗಿಯೇ ಆರ್.ಆರ್ ನಗರದಲ್ಲಿ (RR Nagar) ನನ್ನ ಹೆಸರಿಗೆ ಮನೆ ಖರೀದಿ ಮಾಡಿದ್ದರು. ಮನೆಯನ್ನು ಖರೀದಿಸಲು ನಿರ್ಮಾಪಕ ಸೌಂದರ್ಯ ಜಗದೀಶ್‌ ಮೂಲಕ 1.75 ಕೋಟಿ ರೂ. ಹಣವನ್ನು ಕನಕಪುರ ರಸ್ತೆಯಲ್ಲಿರುವ ನನ್ನ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು. 2018ರ ಫೆಬ್ರವರಿ ತಿಂಗಳಲ್ಲಿ ಮನೆಯ ಗೃಹಪ್ರವೇಶ ಮಾಡಿ ಅಂದಿನಿಂದ ಅಲ್ಲೇ ವಾಸವಿದ್ದೆವು’ಎಂದಿದ್ದಾರೆ.

ಅಲ್ಲದೆ ದರ್ಶನ್‌ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್‌ ಸುಮಾರು 7-8 ವರ್ಷಗಳಿಂದ ಪರಿಚಯವಾಗಿದ್ದ. ನಂತರ ಪವನ್‌ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಪವನ್‌ ನನಗೆ ತುಂಬಾ ಚೆನ್ನಾಗಿ ಗೊತ್ತಿದ್ದ, ನನ್ನ ಎಲ್ಲಾ ವ್ಯವಹಾರಗಳೂ ಅವನಿಗೆ ಗೊತ್ತಿತ್ತು. ದರ್ಶನ್‌ ಮನೆ ಮತ್ತು ನಮ್ಮ ಮನೆಗೆ ಸುಮಾರು ಒಂದೂವರೆ ಕಿಮೀ ದೂರವಿತ್ತು. ಪವನ್‌ಗೆ ನಮ್ಮ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ ಇತ್ತು. ನನ್ನನ್ನು ಅಕ್ಕ ಅಕ್ಕ ಎಂದು ಕರೆಯುತ್ತಿದ್ದ’ ಎಂಬುದಾಗಿ ಹೇಳಿದ್ದಾರೆ.

ದರ್ಶನ್ ಜೀವನದಲ್ಲಿ ಕಿಡಿ:
ಒಟ್ಟಿನಲ್ಲಿ ಸ್ನೇಹ, ಪ್ರೀತಿಯಾಯಿತು. 2017ರಲ್ಲಿ ತಾರಕ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ತುಂಬಾ ಆತ್ಮೀಯವಾದ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೊಟ್ಟ ಮೊದಲ ಬಾರಿ ವಿವಾದದ ಕಿಡಿಯನ್ನ ಹೊತ್ತಿಸಿ ದರ್ಶನ್ ದಾಂಪತ್ಯದಲ್ಲಿ ಬಿರುಗಾಳಿಯನ್ನೂ ಎಬ್ಬಿಸಿದ್ದಳು. ನಂತರದಲ್ಲಿ ಆಗಾಗ ಏನಾದರೂ ಒಂದು ವಿಚಾರಕ್ಕಾಗಿ ದರ್ಶನ್ ಜೊತೆ ಸುದ್ದಿಯಾಗುತ್ತಾ ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯಲು ತನ್ನ ಕೊಡುಗೆಯನ್ನೂ ನೀಡುತ್ತಿದ್ದಳು. ಇತ್ತೀಚೆಗೆ ಕಾಟೇರ ಯಶಸ್ಸಿನ ಸಂದರ್ಭದಲ್ಲಿ “ನನ್ನ ದರ್ಶನ್‌ ಸಂಬಂಧಕ್ಕೆ 10 ವರ್ಷಗಳು” ಎಂದು ಪೋಸ್ಟ್‌ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಜಗಳವೂ ಆಗಿತ್ತು. ಮೊದಲ ಪತಿ ಮತ್ತು ಮಗಳ ಜೊತೆ ಪವಿತ್ರಾ ಗೌಡ ಇರುವ ಫೋಟೋಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ವಿಜಯಲಕ್ಷ್ಮೀ ದರ್ಶನ್(Vijayalakshmi Darshan) ಹಂಚಿಕೊಂಡಿದ್ದರು.

ದರ್ಶನ್, ಪವಿತ್ರ ಮಗಳ ಜನ್ಮದಿನದ ಪಾರ್ಟಿ ವಿವಾದ:
ನಟ ದರ್ಶನ್ ಜನ್ಮದಿನಕ್ಕೆ ಪವಿತ್ರಾ ಗೌಡ ಅವರು ಭರ್ಜರಿ ಪಾರ್ಟಿ ಕೊಟ್ಟಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾದ ನಟಿಯೋರ್ವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೂ ವಿಜಯಲಕ್ಷ್ಮೀ ಅವರು ಆ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೆ ಕೆಲ ತಿಂಗಳುಗಳ ಹಿಂದೆ ದರ್ಶನ್ ಅವರು ಪವಿತ್ರಾ ಗೌಡ ಮಗಳು ಖುಷಿಯ ಜನ್ಮದಿವನ್ನು ಆಚರಿಸಿದ್ದು, ಖುಷಿ ಜೊತೆಗೆ ದರ್ಶನ್ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಪವಿತ್ರಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು.

ಒಟ್ಟಿನಲ್ಲಿ ಸುಂದರವಾಗಿರೋ ಹೆಮ್ಮಾರಿ ಪವಿತ್ರ, ದರ್ಶನ್ ಜೀವನದಲ್ಲಿ, ದಾಂಪತ್ಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ದರ್ಶನ್ ನನ್ನು ಕೊಲೆ ಮಾಡಿಸುವ ಹಂತಕ್ಕೆ ತಂದು ನಿಲ್ಲಿಸಿದ್ದಾಳೆ. ಅಲ್ಲದೆ ಮದವೇರಿದ ನಟನಾಗಿದ್ದ ದರ್ಶನ್ ನ ಅಂಹಕಾರ ಅವರನ್ನು ಬೀದಿಗೆ ತಂದಿದೆ. ಇದರ ಪರಿಣಾಮ ಇನ್ನೂ ಮುಂದೆ ಇದೆ.

1 Comment
  1. john l scott real estate says

    allegheny county real estate I really like reading through a post that can make men and women think. Also, thank you for allowing me to comment!

Leave A Reply

Your email address will not be published.