Home Crime Mumbai: ಎಸಿಬಿ ಅಧಿಕಾರಿಗಳನ್ನು ಕಂಡು ಲಂಚದ ಹಣ ಕಮೋಡ್‌ ಗೆ ಹಾಕಿ ಫ್ಲಶ್‌ ಮಾಡಿದ ಅಗ್ನಿಶಾಮಕ...

Mumbai: ಎಸಿಬಿ ಅಧಿಕಾರಿಗಳನ್ನು ಕಂಡು ಲಂಚದ ಹಣ ಕಮೋಡ್‌ ಗೆ ಹಾಕಿ ಫ್ಲಶ್‌ ಮಾಡಿದ ಅಗ್ನಿಶಾಮಕ ದಳದ ಅಧಿಕಾರಿ

Mumbai
Image Credit: Indian Express

Hindu neighbor gifts plot of land

Hindu neighbour gifts land to Muslim journalist

Mumbai: ಅಗ್ನಿಶಾಮಕದ ಅಧಿಕಾರಿಯೊಬ್ಬರು ಲಂಚ ಪಡೆದಿದ್ದು, ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಇವರಿಂದ ಮರೆಮಾಚಲು ಹಾಗೂ ಕೃತ್ಯಕ್ಕೆ ಹೆದರಿ ಹಣವನ್ನು ಮನೆಯಲ್ಲಿದ್ದ ಶೌಚಾಲಯಕ್ಕೆ ಫ್ಲಶ್‌ ಮಾಡಿರುವ ಘಟನೆಯೊಂದು ನಡೆದಿದೆ. ಆದರೆ ಕ್ರಮಕ್ಕೆ ಮುಂದಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಕೊಳಚೆ ನೀರು ಕಾಲುವೆಯಲ್ಲಿದ್ದ 57 ಸಾವಿರ ರೂ.ಗಳನ್ನು ಪ್ಲಂಬರ್ ಗಳು ಹಾಗೂ ಇತರ ನೌಕರರ ಸಹಾಯದಿಂದ ವಸೂಲಿ ಮಾಡಿದ್ದಾರೆ.

ಏನಿದು ಪ್ರಕರಣ?
ಖಾಸಗಿ ಕಚೇರಿಯ ಸಂಪರ್ಕ ಅಧಿಕಾರಿಯೊಬ್ಬರು ಮುಂಬೈ ಮಹಾನಗರ ಪಾಲಿಕೆಯ ಪೋರ್ಟಲ್‌ನಲ್ಲಿ ಬೊರಿವಲಿ ವೆಸ್ಟ್‌ನಲ್ಲಿರುವ ಔರಂ ಹೋಟೆಲ್‌ಗೆ ಪಿಎನ್‌ನ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅನುಮತಿಯು ಅಗ್ನಿಶಾಮಕ ದಳದ ವ್ಯಾಪ್ತಿಗೆ ಬರುವುದರಿಂದ, ಈ ಅರ್ಜಿಯನ್ನು ದಹಿಸರ್ ವೆಸ್ಟ್‌ನಲ್ಲಿರುವ ಅಗ್ನಿಶಾಮಕ ಠಾಣೆಗೆ ಕಳುಹಿಸಲಾಗಿದೆ. ಈ ಅರ್ಜಿ ಸ್ವೀಕರಿಸಿದ ನಂತರ ಹಿರಿಯ ಕೇಂದ್ರ ಅಧಿಕಾರಿ ಪ್ರಹ್ಲಾದ್ ಶಿತೋಲೆ (43) ಹೋಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮೊಬೈಲ್ ಕ್ಯಾಲ್ಕುಲೇಟರ್ ನಲ್ಲಿ ಒಂದು ಲಕ್ಷ 30 ಸಾವಿರ ರೂಪಾಯಿ ಟೈಪ್ ಮಾಡಿ ಈ ಮೊತ್ತ ಪಾವತಿಸಬೇಕು ಎಂದರು. ಇಷ್ಟು ಮೊತ್ತ ಪಾವತಿಸಲು ಸಾಧ್ಯವಾಗದ ಕಾರಣ ಕಚೇರಿ ಮಾಲೀಕರೊಂದಿಗೆ ಅಧಿಕಾರಿ ಶಿಟೋಲೆ ಅವರನ್ನು ಭೇಟಿಯಾದರು. ಚರ್ಚೆಯ ನಂತರ, ಶಿಟೋಲೆ ಮತ್ತೆ ಮೊಬೈಲ್ ಕ್ಯಾಲ್ಕುಲೇಟರ್‌ನಲ್ಲಿ 80 ಸಾವಿರ ಮೊತ್ತವನ್ನು ಟೈಪ್ ಮಾಡಿದರು. ಈ ಮೊತ್ತ ಪಾವತಿಸಲು ಸಾಧ್ಯವಾಗದ ಕಾರಣ ಅಧಿಕಾರಿ ವರ್ಲಿಯ ಎಸಿಬಿ ಕಚೇರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿದ್ದರು.

ಏತನ್ಮಧ್ಯೆ, ಅರ್ಜಿದಾರರು ಮೊತ್ತವನ್ನು ಕಡಿಮೆ ಮಾಡಲು ಮತ್ತೊಮ್ಮೆ ಶಿಟೋಲ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ಎಂದು ಶಿಟೋಲೆ ಹೇಳಿದರು. ಶಿಟೋಲೆ ವಾಸಿಸುವ ಅದೇ ಕಟ್ಟಡದಲ್ಲಿ ಅವರ ಕಚೇರಿ ಇದೆ. ಅರ್ಜಿದಾರರು 60,000 ರೂ. ಪಾವತಿಸಲು ಹೋದಾಗ, ಅವರು ಕಟ್ಟಡದ ಅಡಿಯಲ್ಲಿ ಅವರನ್ನು ಭೇಟಿಯಾದರು.

ಲಿಫ್ಟ್ ನಲ್ಲಿದ್ದ ಅರ್ಜಿದಾರರಿಂದ 60 ಸಾವಿರ ರೂಪಾಯಿ ತೆಗೆದುಕೊಂಡು ಕಚೇರಿಗೆ ತೆರಳಿದ್ದರು. ಆದರೆ ನೋಟುಗಳಿಗೆ ವಿಶೇಷ ರೀತಿಯ ಪೌಡರ್ ಕೂಡ ಲೇಪಿತವಾಗಿರುವುದನ್ನು ಗಮನಿಸಿದ ಅಧಿಕಾರಿ ಕೂಡಲೇ ಅನುಮಾನಗೊಂಡ ಮನೆಗೆ ತೆರಳಿ ಶೌಚಾಲಯದಲ್ಲಿ ಫ್ಲಶ್‌ ಮಾಡಿದ್ದಾರೆ. ನಂತರ 60 ಸಾವಿರ ರೂ. ಗಾಗಿ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಹುಡುಕಾಡಿದಾಗ ಏನೂ ಸಿಗದ ಕಾರಣ ಶಿಟೋಲೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಅಸ್ಪಷ್ಟ ಉತ್ತರ ನೀಡಿದ ಶಿಟೋಲೆ, ಹಣವನ್ನು ಶೌಚಾಲಯಕ್ಕೆ ಎಸೆದಿದ್ದೇನೆ ಎಂದು ಹೇಳಿದ್ದಾರೆ.

ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಾಕ್ಷ್ಯಗಳು ಪ್ರಮುಖವಾಗಿರುವುದರಿಂದ ಎಸಿಬಿ ಅಧಿಕಾರಿಗಳು ಪ್ಲಂಬರ್ ಸಹಾಯದಿಂದ ಚರಂಡಿಯನ್ನು ತೆರೆದರು. ಸುಮಾರು 20 ಚರಂಡಿಗಳಿಂದ 57 ಸಾವಿರ ರೂ. ಶಿಟೋಲೆ ವಿರುದ್ಧ ಲಂಚದ ಜತೆಗೆ ಸಾಕ್ಷ್ಯ ನಾಶ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.