Love Cheating: ಪ್ರೀತಿ ಹೆಸರೇಳಿ ಮಂಚ ಹತ್ತಿಸಿದ – ಮದ್ವೆ ಆಗ್ತೀನಂತ ಮಂಟಪಕ್ಕೆ ಬರೋವಾಗ್ಲೇ ಎಸ್ಕೇಪ್ ಆದ !! ಇಲ್ಲಿದೆ ಪಾಗಲ್ ಪ್ರೇಮಿಯ ಪ್ರೇಮ್ ಕಹಾನಿ !!

Tumakur news love cheating to woman on promise of marriage latest news

Love Cheating: ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೀತಿಸಿ (Love)ಮದುವೆಯಾದ(Marriage)ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇದೆ. ಇದರ ನಡುವೆ, ಪ್ರೀತಿ ಪ್ರೇಮ ಪ್ರಣಯ ಎಂದೆಲ್ಲ ಕಥೆ ಕೇಳಿ ಮೋಸ(Love Cheating)ಮಾಡುವ ಪ್ರಕರಣಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ. ಇದೀಗ, ತುಮಕೂರಿನಲ್ಲಿ ಯುವತಿಗೆ ಯುವಕನೊಬ್ಬ ಮದುವೆಯ ದಿನವೇ ಪರಾರಿಯಾಗಿ ವಂಚಿಸಿದ ಘಟನೆ ವರದಿಯಾಗಿದೆ.

ಬೆಂಗಳೂರಿನ ನೆಲಗದರನಹಳ್ಳಿ ಹಾಗೂ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಯುವತಿಗೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ(Social Media) ಪರಿಚಯವಾಗಿ, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ(Love). ಇದಾದ ಬಳಿಕ ಬೆಂಗಳೂರಿನ (Bengaluru) ನೆಲಗದರನಹಳ್ಳಿ ಮೂಲಕ ಗಜೇಂದ್ರ, ಮದುವೆಯಾಗುವುದಾಗಿ (Marriage) ನಂಬಿಸಿದ್ದಾನೆ. ಬೆಂಗಳೂರಿನ ಪಿಣ್ಯಾದ ದುಗ್ಗಾಲಮ್ಮ ದೇವಾಲಯದಲ್ಲಿ ಇವರಿಬ್ಬರ ಮದುವೆ ನಿಶ್ಚಯವಾಗಿದ್ದು, ಆದರೆ ಮದುವೆ ಮುಹೂರ್ತ ಸಮೀಪಿಸುತ್ತಿದ್ದಂತೆ ಗಜೇಂದ್ರ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಇವರಿಬ್ಬರ ನಡುವೆ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಗಜೇಂದ್ರ ಆಕೆಯನ್ನು ಹೋಟೆಲ್ ಲಾಡ್ಜ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಎನ್ನಲಾಗಿದೆ. ಎರಡೂವರೆ ವರ್ಷಗಳಿಂದ ಪ್ರೀತಿಸಿ ಇದ್ದಕ್ಕಿದಂತೆ ಮನೆಯಲ್ಲಿ ಒಪ್ಪುತ್ತಿಲ್ಲವೆಂದು ಯುವಕ ಹೊಸ ಕ್ಯಾತೆ ಶುರು ಮಾಡಿದ್ದಾನೆ. ಹೀಗಾಗಿ,ಯುವತಿ ತುಮಕೂರು ಮಹಿಳಾ ಪೊಲೀಸ್ ಠಾಣೆ ದೂರು ನೀಡಿ, ಮಹಿಳಾ ಪೊಲೀಸ್ ಠಾಣೆಯವರು ಕರೆಸಿ ಇಬ್ಬರು ಮದುವೆಯಾಗುವಂತೆ ಪರಸ್ಪರ ಒಪ್ಪಿಸಿ ಕಳಿಸಿಕೊಟ್ಟಿದ್ದಾರೆ. ಮದುವೆಯಾಗುವುದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಕೂಡ ಬರೆಸಿಕೊಟ್ಟಿದ್ದ ಗಜೇಂದ್ರ, ಮದುವೆಯಾಗಲು ಹೋಗುತ್ತಿರುವಾಗ ಮಾರ್ಗ ಮಧ್ಯೆಯೇ ಕಾರು ಇಳಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಗಜೇಂದ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Canara Bank,SBI ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್​ಗಳಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ಬಿಡುಗಡೆ!!!

Leave A Reply

Your email address will not be published.