Kumaraswamy- Radhika: ಕುಮಾರಸ್ವಾಮಿ – ರಾಧಿಕಾ ಮಧ್ಯೆ ಬಿರುಕು, ಆಸ್ಪತ್ರೆಗೆ ಯಾಕ್ ಬರ್ಲಿಲ್ಲ ಸೆಕೆಂಡ್ ವೈಫು ?

Kumaraswamy- Radhika: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಸ್ವಸ್ಥರಾಗಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಇದು ಬಿರುಸಿನ ಚುನಾವಣಾ ಪ್ರಚಾರದ ಸಮಯವಾಗಿದ್ದು ಆದಷ್ಟು ಬೇಗ ಮುಖ್ಯಮಂತ್ರಿ ಪಟ್ಟದ ಮೇಲೆ ಕುಳಿತುಕೊಳ್ಳುವ ಉತ್ಸಾಹದಲ್ಲಿರುವ ಕುಮಾರಸ್ವಾಮಿ ಅವರು ಈ ರೀತಿ ಅನಾರೋಗ್ಯ ಬಿದ್ದದ್ದು, ಅದೂ ಈ ಚುನಾವಣಾ ಯುದ್ಧಕಾಲದಲ್ಲಿ ದೊಡ್ಡ ದುರಂತವೇ ಸರಿ.

ಕಾಲಿಗೆ ಟೈರು ಕಟ್ಟಿಕೊಂಡು ಊರೂರು ಅಲೆದು ಕೇರಿ ಕೇರಿ ತಿರುಗಿ ಮತದಾರ ಪ್ರಭುವಿನಲ್ಲಿ ಒಂದು ಮತ ನೀಡಲು ಬೇಡಲು ಹೊರಡುವ ರಾಜಕಾರಣಿಗಳ ಜೊತೆ ಕುಮಾರಸ್ವಾಮಿಯವರು ಕೂಡಾ ಊರು ಸುತ್ತಲೂ ಜನ ಸ್ಪಂದನೆಗೆ ಹೊರಡಬೇಕಿತ್ತು. ಆದರೆ ಅವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಇದೀಗ ಕುಮಾರಸ್ವಾಮಿಯವರನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳಲು ಯಾರು ಬರುತ್ತಿಲ್ಲವಂತೆ. ಅತ್ತ ಪತ್ನಿ ಅನಿತಾ ಕುಮಾರಸ್ವಾಮಿಯವರು ರಾಜಕೀಯದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಬಿಜಿಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಕೂಡ ಹಳೆ ಮೈಸೂರು ಭಾಗದಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿಯವರು ತನ್ನ ಪುಟಾಣಿ ಮಗುವಿನ ಆರೈಕೆಯಲ್ಲಿದ್ದಾಳೆ. ಹೀಗಿರುವಾಗ, ಕುಮಾರಸ್ವಾಮಿಯವರು ಆಸ್ಪತ್ರೆಯಲ್ಲಿ ಕುಟುಂಬ ಇಲ್ಲದೆ ಏಕಾಂಗಿಯಾಗಿದ್ದಾರೆ.

ಹೀಗೆ ಏಕಾಂಗಿಯಾಗಿ ಆಸ್ಪತ್ರೆಯಲ್ಲಿ ಮಲಗಿದ್ದರೂ, ಯಾಕೆ ರಾಧಿಕಾ ಕುಮಾರಸ್ವಾಮಿ  (Kumaraswamy- Radhika) ಬಂದು ಕುಮಾರಸ್ವಾಮಿಯ ಆರೈಕೆಯನ್ನು ನೋಡಿಕೊಳ್ಳುವುದಿಲ್ಲ? ಯಾಕೆ ಅವರಿಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಅವರಿಬ್ಬರ ಮಧ್ಯೆ ಇರುವ ಸಂಬಂಧ ಬಿಗಡಾಯಿಸಿದೆಯೇ? ಮುಂತಾದ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ಪಡೆದುಕೊಳ್ಳುತ್ತಿವೆ.

ಇದೀಗ ಕುಮಾರಸ್ವಾಮಿಯವರಿಗೆ 63 ವರ್ಷ ವಯಸ್ಸು. ಜೊತೆಗೆ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳಿವೆ. ಈಗಾಗಲೇ ಕುಮಾರ ಸ್ವಾಮಿಯವರದು ಇಳಿ ವಯಸ್ಸು. ಈ ಕಾರಣದಿಂದ ಕುಮಾರಸ್ವಾಮಿಯವರು ಆಸಕ್ತಿ ಕಳೆದುಕೊಂಡಿದ್ದಾರೆ. ಹಿಂದಿನ ಕ್ರೇಜ್ ಈಗ ಇಲ್ಲ ಅನ್ನಾಲಾಗುತ್ತಿದೆ. ಈಗ ರಾಧಿಕಾ ಕುಮಾರಸ್ವಾಮಿ ಮತ್ತು ಕುಮಾರ ಸ್ವಾಮಿಯವರ ಭೇಟಿ ಅಪರೂಪ ಎನ್ನಲಾಗುತ್ತಿದೆ. ಅಲ್ಲದೆ, ಕುಮಾರಸ್ವಾಮಿಯವರು ರಾಜಕೀಯ ಚಟುವಟಕೆಗಳಲ್ಲಿ ಸದಾ ತಲ್ಲೀನರಾಗಿರುತ್ತಾರೆ.

ಇನ್ನೊಂದು ಮೂಲಗಳ ಪ್ರಕಾರ, ನಿಖಿಲ್ ಮದುವೆ ಆದ ಮೇಲೆ ರೇವತಿ ದಂಪತಿಗಳಿಗೆ ಮಗು ಆದ ಮೇಲೆ ಕುಮಾರಸ್ವಾಮಿ ಹೆಚ್ಚಿನ ಸಮಯ ತಮ್ಮ ಹಿಂದಿನ.ಸಂಸಾರದ ಜತೆ ಕಳೆಯಲು ಇಷ್ಟ ಪಡುತ್ತಾರೆ ಇನ್ನೊಂದು ಒಂದು ಸುದ್ದಿ. ಕುಮಾರಣ್ಣ ಮತ್ತು ಅನಿತಾ ಕುಮಾರಸ್ವಾಮಿ ಮಧ್ಯೆ ಹಿಂದೆ ಇದ್ದ ಮುನಿಸು ಈಗಿಲ್ಲ. ಇಬ್ಬರಿಗೂ ವಯಸ್ಸಾದಂತೆ ಅವರಿಬ್ಬರ ಅನ್ಯೋನ್ಯತೆ ಜಾಸ್ತಿ ಆಗಿದೆ. ಅದು ಹಲವು ಬಾರಿ ವೇದಿಕೆಗಳಲ್ಲಿಯೇ ಸಾಬೀತಾಗಿದೆ ಎನ್ನುವವರು ಇದ್ದಾರೆ.

ಅತ್ತ ರಾಧಿಕಾ ಕುಮಾರಸ್ವಾಮಿ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ಸಂಪತ್ತು ಕೊಡಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಆಗಾಗ ಸಿನಿಮಾಗಳಲ್ಲಿ ನಟಿಸುವುದು ಮತ್ತು ಮಗಳು ಶಮಿಕಾಳನ್ನು ನೋಡಿಕೊಳ್ಳುವುದು ಬಿಟ್ಟರೆ ಆಕೆ ಗಮನ ಹರಿಸುವುದು ತನ್ನ ಬಿಸಿನೆಸ್ ಅನ್ನು ಹೇಗೆ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂದು. ಆಕೆಗೆ ಎಲ್ಲದಕ್ಕಿಂತ ಮುಖ್ಯ ದುಡ್ಡೇ ಎನ್ನಲಾಗುತ್ತಿದೆ. ಏನೇ ಇರಲಿ, ಕುಮಾರ ಸ್ವಾಮಿ ಬೇಗ ಹುಷಾರಾಗಿ ರಾಜಕೀಯ ಫೈಟ್ ಗೆ ಬರಲಿ. ಕೆಲವೊಮ್ಮೆ ಕಂಡೋರ ಜಗಳ ನೋಡೋದಕ್ಕೂ ಮಜಾ ಬರುತ್ತೆ, ಅಲ್ಲವೇ ?

ಇದನ್ನೂ ಓದಿ: Radhika Kumaraswamy : ಎಲೆಕ್ಷನ್ ಹತ್ತಿರ ಬಂದಾಗಲೇ ಹೊಸ ವೇಷದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ!

 

Leave A Reply

Your email address will not be published.