Astro Tips : ಈ ವಸ್ತುಗಳನ್ನು ಪರ್ಸಿನಲ್ಲಿಡಿ, ಹೊಸ ವರ್ಷದಂದು ಅದೃಷ್ಟ ನಿಮ್ಮದಾಗುತ್ತೆ

ಭಾರತೀಯರಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಎಲ್ಲೆಡೆ ಹರಡಿದೆ. ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜವಾಗಿದೆ.ಹಾಗೆಯೇ ನಿಮ್ಮ ಪರ್ಸ್ ನಲ್ಲಿ ಲಕ್ಷ್ಮಿ ನೆಲೆಸಲು ಈ ಸಲಹೆಯನ್ನು ಅನುಸರಿಸುವುದು ಸೂಕ್ತವಾಗಿದೆ.

ಹೊಸ ವರ್ಷದಂದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ವಾಸ್ತುವಿನಲ್ಲಿ ಕೆಲವು ವಿಷಯಗಳನ್ನು ತಿಳಿಸಲಾಗಿದೆ. ಅಂತಹವುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಲಕ್ಷ್ಮಿ ದೇವಿಯನ್ನು ಒಳಿಸಲು ಕಾರಣವಾಗುತ್ತದೆ . ಹೌದು ಹೊಸ ವರ್ಷದಂದು ನಿಮ್ಮ ಪರ್ಸ್‌ನಲ್ಲಿ ಹೊಸ ಚಿನ್ನ ಅಥವಾ ಬೆಳ್ಳಿ ನಾಣ್ಯವನ್ನು ಇರಿಸಿ. ಮೊದಲು ಈ ನಾಣ್ಯವನ್ನು ಲಕ್ಷ್ಮಿಯ ಪಾದಗಳಿಗೆ ಸ್ಪರ್ಶಿಸಿ ಮತ್ತು ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಇದರಿಂದ ಸಂಪತ್ತಿನ ದೇವರು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ ಎಂಬುದು ವಾಸ್ತು ಪ್ರಕಾರದ ನಿಲುವಾಗಿದೆ.

  • ವಾಸ್ತು ಪ್ರಕಾರ, ಲಕ್ಷ್ಮಿ ದೇವಿ ಕುಳಿತುಕೊಂಡ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಸಹ ಪ್ರಯೋಜನಕಾರಿಯಾಗಿದೆ. ಈ ಪರಿಹಾರವನ್ನು ಮಾಡುವುದರಿಂದ, ನಿಮಗೆ ಯಾವತ್ತೂ ಹಣದ ಕೊರತೆಯನ್ನು ಬರುವುದಿಲ್ಲ. ಅದಲ್ಲದೆ ಲಕ್ಷ್ಮಿ ದೇವಿಯ ಅನುಗ್ರಹವು ಯಾವಾಗಲೂ ಇರುತ್ತದೆ. ಪರ್ಸ್‌ನಲ್ಲಿ ಕುಳಿತಿರುವ ಲಕ್ಷ್ಮಿಯ ಫೋಟೋವನ್ನು ಇಟ್ಟುಕೊಂಡು, ಸಂಪತ್ತಿನ ದೇವತೆ ಶಾಶ್ವತವಾಗಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

ವಾಸ್ತು ನಿಯಮಗಳ ಪ್ರಕಾರ, ಕೆಂಪು ಬಣ್ಣದ ಕಾಗದದ ಮೇಲೆ ನಿಮ್ಮ ಆಸೆಯನ್ನು ಬರೆದು ರೇಷ್ಮೆ ದಾರದಿಂದ ಕಟ್ಟಿ, ಲಕ್ಷ್ಮಿ ದೇವಿಯನ್ನು ಸ್ಮರಿಸುತ್ತಾ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರೊಂದಿಗೆ ಲಕ್ಷ್ಮಿ ದೇವಿಯ ಕೃಪೆಯು ವರ್ಷವಿಡೀ ನಿಮ್ಮ ಮೇಲಿರುತ್ತದೆ.

  • ನೀವು ಸ್ವಲ್ಪ ಅಕ್ಕಿ ಕಾಳುಗಳನ್ನು ಪರ್ಸ್‌ನಲ್ಲಿ ಇರಿಸಿ. ಇದರಿಂದ ಅನಪೇಕ್ಷಿತ ಖರ್ಚುಗಳಿಂದ ಮುಕ್ತಿ ದೊರೆಯುತ್ತದೆ. ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.

ವಾಸ್ತು ತಜ್ಞರ ಪ್ರಕಾರ ಪರ್ಸ್ ನಲ್ಲಿ ಇಡಬಾರದ ವಸ್ತುಗಳನ್ನು ಇಲ್ಲಿ ಹೇಳಲಾಗಿದೆ. ಅವುಗಳೆಂದರೆ ಹರಿದ, ಹೊಲಸದ ನೋಟುಗಳನ್ನು ಎಂದಿಗೂ ಪರ್ಸ್‌ನಲ್ಲಿ ಇಡಬಾರದು ಎಂದು ಹೇಳುತ್ತಾರೆ. ಹಾಗೆಯೇ ವೇಸ್ಟ್ ಪೇಪರ್, ಬ್ಲೇಡ್ ಇತ್ಯಾದಿಗಳನ್ನು ಇಡಬೇಡಿ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ಮತ್ತು ಸತ್ತ ವ್ಯಕ್ತಿಯ ಫೋಟೋವನ್ನು ಪರ್ಸ್‌ನಲ್ಲಿ ಇಡಬಾರದು. ಅವರು ನಿಮಗೆ ಎಷ್ಟು ಆತ್ಮೀಯರಾಗಿದ್ದರೂ ಪರವಾಗಿಲ್ಲ. ಈ ರೀತಿ ಮಾಡುವುದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಎಂಬ ಸಲಹೆಯನ್ನು ನೀಡಲಾಗಿದೆ.

ಈ ಮೇಲಿನ ಸಲಹೆಗಳನ್ನು ಅನುಸರಿಸುವ ಮೂಲಕ ಲಕ್ಷ್ಮೀ ದೇವಿಯನ್ನು ಒಳಿಸಿಕೊಂಡು ಹಣಕಾಸಿನ ತೊಂದರೆಗಳನ್ನು ನೀಗಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.