Home latest ಪರೇಶ್‌ ಮೇಸ್ತ ಸಾವು ಪ್ರಕರಣ : ʼಸಿಬಿಐ ವರದಿಯನ್ನು ಒಪ್ಪಲ್ಲʼ – ಪ್ರಮೋದ್‌ ಮುತಾಲಿಕ್

ಪರೇಶ್‌ ಮೇಸ್ತ ಸಾವು ಪ್ರಕರಣ : ʼಸಿಬಿಐ ವರದಿಯನ್ನು ಒಪ್ಪಲ್ಲʼ – ಪ್ರಮೋದ್‌ ಮುತಾಲಿಕ್

Hindu neighbor gifts plot of land

Hindu neighbour gifts land to Muslim journalist

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದರಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಇದನ್ನು ಕೊಲೆ ಎಂದು ಬಿಂಬಿಸಲಾಗಿತ್ತು. ಈ ಸಾವಿನ ಪಟ್ಟವನ್ನು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಅನ್ಯಕೋಮಿನವರ ತಲೆಗೆ ಕಟ್ಟಲಾಗಿತ್ತು. ಹಲವು ಬಗೆಯ ದೊಂಬಿಗಳು, ಬಂದ್‌ ಗಳು ಮುಂತಾದವು ಸಂಭವಿಸಿದ್ದವು.

ಆದರೆ 5 ವರ್ಷದ ಸುದೀರ್ಘ ತನಿಖೆಯ ಬಳಿಕ ಸಿ ಬಿ ಐ ʼಇದು ಕೊಲೆಯಲ್ಲ, ಆಕಸ್ಮಿಕ ಸಾವುʼ ಎಂದು ವರದಿ ನೀಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಕುರಿತು ಹಲವರು ಬಿಜೆಪಿ ವಿರೋಧಿಗಳು ಬಿಜೆಪಿಯನ್ನು ಮತ್ತು ಹಿಂದೂ ಪರ ಸಂಘಟನೆಗಳನ್ನು ವ್ಯಾಪಕ ಟೀಕೆಗೊಳಪಡಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಸಿ ಬಿ ಐ ನೀಡಿದ ವರದಿಯನ್ನು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅಲ್ಲಗಳೆದಿದ್ದಾರೆ. ʼಪರೇಶ್ ಮೇಸ್ತ ನನ್ನು ನೂರಕ್ಕೆ ನೂರು ಕೊಲೆಗೆಯ್ಯಲಾಗಿದೆ. ಇದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಈ ಕೇಸನ್ನು ಮರು ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʼಆ ಸಂದರ್ಭದಲ್ಲಿ ಅಧಿಕಾರದ ಗದ್ದುಗೆಯಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪೂರಕ ಸಾಕ್ಷ್ಯಗಳನ್ನು ನಾಶ ಮಾಡಿದೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಮರು ತೆರೆಯಬೇಕು. ಸಿಬಿಐ ನೀಡಿದ ವರದಿ ಮೋಸದ ವರದಿ. ಇದನ್ನು ಒಪ್ಪಲ್ಲʼ ಎಂದೂ ಹೇಳಿದ್ದಾರೆ.