Home ದಕ್ಷಿಣ ಕನ್ನಡ ಸುಳ್ಯ : ಫಾಸ್ಟ್ ಫುಡ್ ಸೆಂಟರ್‌ಗೆ ವಾಹನ ಡಿಕ್ಕಿ, ಅನ್ನದ ಪಾತ್ರೆ ಮೈಮೇಲೆ ಬಿದ್ದು ಯುವಕ...

ಸುಳ್ಯ : ಫಾಸ್ಟ್ ಫುಡ್ ಸೆಂಟರ್‌ಗೆ ವಾಹನ ಡಿಕ್ಕಿ, ಅನ್ನದ ಪಾತ್ರೆ ಮೈಮೇಲೆ ಬಿದ್ದು ಯುವಕ ಗಂಭೀರ

Hindu neighbor gifts plot of land

Hindu neighbour gifts land to Muslim journalist

ಸುಳ್ಯ: ಅತಿವೇಗದಿಂದ ಬಂದ ಬೊಲೆರೋ ವಾಹನವೊಂದು ಫಾಸ್ಟ್ ಫುಡ್ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಅನ್ನದ ಪಾತ್ರೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುರುಂಜಿಭಾಗ್ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ನಡೆದಿದೆ.

ಕುರುಂಜಿಭಾಗ್ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ಇರುವ ಫಾಸ್ಟ್ ಫುಡ್ ಅಂಗಡಿಗೆ ಶನಿವಾರ ರಾತ್ರಿ ಏಳು ಗಂಟೆ ಸುಮಾರಿಗೆ ಬೊಲೆರೋ ವಾಹನ ಬಂದು ಏಕಾಏಕಿ ಡಿಕ್ಕಿ ಹೊಡೆದಿದೆ.

ಈ ವೇಳೆ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಾಂಧಿನಗರ ನಿವಾಸಿ ಪ್ರಸಾದ್ ಎಂಬುವರು ಅನ್ನ ಬೇಯಿಸುತ್ತಿದ್ದು, ಅವರ ಸ್ನೇಹಿತ ಹಾಗೂ ಗ್ರಾಹಕರೊಬ್ಬರು ಈ ಸಂದರ್ಭ ಅಂಗಡಿಯೊಳಗಿದ್ದರು.
ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಅನ್ನ ಬೇಯುತ್ತಿದ್ದ ಪಾತ್ರೆ ಪ್ರಸಾದ್ ಮೈಮೇಲೆ ಬಿದ್ದು ಮೈಯಲ್ಲಿ ಸುಟ್ಟ ಗಾಯವಾಗಿದೆ.

ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದ್ದು, ಸುಳ್ಯ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.