Home ದಕ್ಷಿಣ ಕನ್ನಡ ಮಂಗಳೂರು: ಬಾಲಕನ ಮೇಲೆ ಹರಿದ ಟಿಪ್ಪರ್!! ಸೈಕಲ್ ನಲ್ಲಿ ಆಡುತ್ತಿದ್ದಾಗ ಘಟನೆ-ಆರು ವರ್ಷದ ಬಾಲಕ ಮೃತ್ಯು

ಮಂಗಳೂರು: ಬಾಲಕನ ಮೇಲೆ ಹರಿದ ಟಿಪ್ಪರ್!! ಸೈಕಲ್ ನಲ್ಲಿ ಆಡುತ್ತಿದ್ದಾಗ ಘಟನೆ-ಆರು ವರ್ಷದ ಬಾಲಕ ಮೃತ್ಯು

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ನಗರದ ಬಜಾಲ್ ಕಟ್ಟಪುಣಿ ಎಂಬಲ್ಲಿ ಟಿಪ್ಪರ್ ಲಾರಿ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ಬುಧವಾರ ಸಂಜೆ ಆರು ಗಂಟೆ ವೇಳೆಗೆ ನಡೆದಿದೆ.

ಬಜಾಲ್ ಕಟ್ಟಪುಣಿಯ ಜಲ್ಲಿಗುಡ್ಡೆ ಸಮೀಪದ
ಕೋರ್ದಬ್ಬು ದೈವಸ್ಥಾನದ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಬಾಲಕ ಸೈಕಲ್ ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಲಾರಿ ಬಾಲಕನ ಮೇಲಿನಿಂದ ಹರಿದಿದೆ. ಸ್ಥಳೀಯ ನಿವಾಸಿ ಹಿದಾಯತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಎಂಬುವವನೇ ಮೃತ ಬಾಲಕ.

ಮೊಹಮ್ಮದ್ ಜೀಶನ್ ಮತ್ತು ಇನ್ನೊಬ್ಬ ಬಾಲಕ ಜೊತೆಯಾಗಿ ಅಂಗಡಿಗೆಂದು ಬಂದಿದ್ದು ಒಬ್ಬ ಹುಡುಗ ಇಳಿದು ಹೋಗಿದ್ದಾನೆ ಎನ್ನಲಾಗುತ್ತಿದೆ. ಈ ವೇಳೆ ಸೈಕಲ್ ನಲ್ಲಿದ್ದ ಹುಡುಗನ ಮೇಲೆ ಟಿಪ್ಪರ್ ಡಿಕ್ಕಿಯಾಗಿದೆ. ಕಟ್ಟಪುಣಿ ರಸ್ತೆ ಕಿರಿದಾದ ರಸ್ತೆಯಾಗಿದ್ದು ಟಿಪ್ಪರ್ ಲಾರಿಯಲ್ಲಿ ಚಾಲಕ ಮಣ್ಣು ಹೇರಿಕೊಂಡು ಫೈಸಲ್ ನಗರಕ್ಕೆ ತೆರಳುತ್ತಿದ್ದ. ಘಟನೆ ಆಗುತ್ತಲೇ ಜನ ಸೇರಿದ್ದು, ಲಾರಿ ಚಾಲಕ ಅಬುಬಕ್ಕರ್ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.