ಸುಳ್ಯ: ಮನೆಯ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಅಪಾರ ನಷ್ಟ ದಕ್ಷಿಣ ಕನ್ನಡ By ನಿಶ್ಮಿತಾ ಎನ್. On Apr 10, 2022 Share the Article ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸುಳ್ಯ ತಾಲೂಕಿನ ಪೆರಾಜೆ ಗ್ರಾಮದ ಪಾಳ್ಯ ಎಂಬಲ್ಲಿ ನಡೆದಿದೆ. ದಿವಂಗತ ಬಾಳಪ್ಪ ಗೌಡ ಅವರ ಪತ್ನಿ ವಾಸಮ್ಮ ಎಂಬವರ ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದ್ದು, ಅಪಾರ ನಷ್ಟ ಉಂಟಾಗಿದೆ.