ಪುರಾತನ ದೇವಾಲಯವನ್ನೇ ಅಗೆದು ಧ್ವಂಸ ಮಾಡಿದ ದುಷ್ಕರ್ಮಿಗಳು!! ನಿಧಿಯಾಸೆಗೆ ಎದೆಯೆತ್ತರದ ಗುಂಡಿ ತೋಡಿದವರಿಗೆ ಸಿಕ್ಕಿದ್ದು ಏನು!??
ದುಷ್ಕರ್ಮಿಗಳ ತಂಡವೊಂದು ನಿಧಿಯ ಆಸೆಗಾಗಿ ದೇವಾಲಯವನ್ನೇ ಪುಡಿಗೈದ ಘಟನೆಯೊಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದ ಕೃಷ್ಣ ದೇವಾಲಯದಲ್ಲಿ ಈ ಘಟನೆ ನಡೆದಿದ್ದು,ದೇವರ ಮೂರ್ತಿಯನ್ನು ಕಿತ್ತೆಸೆದು ಎದೆಯೆತ್ತರದ ಗುಂಡಿ ತೋಡಿ ದೇವಾಲಯವನ್ನೇ ಧ್ವಂಸಗೊಳಿಸಲಾಗಿದೆ.
ದೇಗುಲದ ಕೆಳ ಭಾಗದಲ್ಲಿ ನಿಧಿ ಇದೆ ಎಂಬ ಉಹಾಪೋಹಗಳನ್ನು ನಂಬಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು,ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.