Delhi : ಹವಮಾನ ವೈಪರಿತ್ಯದಿಂದಾಗಿ ಹಾರದ ಇಂಡಿಗೋ ವಿಮಾನ – ಫ್ಲೈಟ್ ಒಳಗೆ ಲಾಕ್ ಆದ ಕರ್ನಾಟಕ ಸಚಿವರು, ಶಾಸಕರು

Delhi : ಹವಮಾನವಾಗಿ ಪರಿಚಯದಿಂದಾಗಿ ದೆಹಲಿಯಿಂದ ಬೆಳಗಾವಿಗೆ ಹಾರಟ ನಡೆಸಬೇಕಾಗಿದ್ದ ಇಂಡಿಗೋ ವಿಮಾನ ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನದೊಳಗಡೆಯೇ ಕರ್ನಾಟಕದ ಶಾಸಕರು, ಸಚಿವರು ಲಾಕ್ ಆಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ವೋಟ್ ಚೋರಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಮತ್ತು ನಾಯಕರು ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವ ಅಧಿವೇಶನಕ್ಕೆ ತೆರಳಲು ಇಂದು ಬೆಳಗ್ಗೆ ದೆಹಲಿಯಲ್ಲಿ ವಿಮಾನ ಹತ್ತಿದ್ದರು. ಸುಮಾರು ಎರಡು ಗಂಟೆ ಕಳೆದರೂ ವಿಮಾನ ಮೇಲಕ್ಕೆ ಹಾರಾಟ ನಡೆಸಲಿಲ್ಲ. ಈ ಹಿನ್ನಲೆಯಲ್ಲಿ ಶಾಸಕ, ಸಚಿವರು ಮತ್ತು ಮುಖಂಡರು ಇಂಡಿಗೋ ವಿಮಾನದಲ್ಲಿಯೇ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ವಿಮಾನದಲ್ಲಿ ಇರುವ ಸಚಿವರ, ಶಾಸಕರ ಪಟ್ಟಿ:
- ಎನ್ ಕೋನರೆಡ್ಡಿ,2. ಬಸನಗೌಡ ಬಾದರ್ಲಿ3. ಆನಂದ್ ಗದೇವರ್ಮಠ್4. ಸಚಿವ ಹೆಚ್ ಕೆ ಪಾಟೀಲ5. ಸಚಿವೆ ಲಕ್ಷ್ಮೀ ಹೆಬಾಳ್ಕರ್6. ಸಚಿವ ಶರಣು ಪ್ರಕಾಶ್ ಪಾಟೀಲ್7. ರಾಜು ಗೌಡ8. ಸಲೀಂ ಅಹಮದ್9. ತನ್ವೀರ್ ಸೇಠ್10. ಸಚಿವ ಸತೀಶ್ ಜಾರಕಿಹೊಳಿ11. ಜಿ ಎಸ್ ಪಾಟೀಲ್12. ಗುತ್ತೆದಾರ್,13. ಎಚ್ ಡಿ ರೇವಣ್ಣ14. ಈಶ್ವರ್ ಖಂಡ್ರೆ15. ಜೆ ಟಿ ಪಾಟೀಲ್16. ಕಾಮಕನೂರ್17. ನಾಗೇಂದ್ರ18. ಎಂ ಬಿ ಪಾಟೀಲ್19. ಅಲ್ಲಂಪ್ರಭು20. ರೆಹಮಾನ್ ಖಾನ್21. ಸಚಿವ ಕೆ ಜಿ ಜಾರ್ಜ್
Comments are closed.