Mantesh Beelagi : ಮಾಂತೇಶ್ ಬೀಳಗಿ ಅವರದ್ದು ಅಪಘಾತವಲ್ಲ, ಮರ್ಡರ್? ವೈರಲ್ ಆಯ್ತು ವಿಡಿಯೋ

Mantesh Beelagi : ನಾಡಿನ ಹೆಸರಂತ ಹಾಗೂ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಮಾಂತೇಶ್ ಬೀಳಗಿಯವರು ನಿನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಿಧನರಾಗಿದ್ದಾರೆ. ಇಡೀ ರಾಜ್ಯವೇ ನಿಷ್ಕಳಂಕ ಅಧಿಕಾರಿಯ ಸಾವಿಗೆ ಕಂಬನಿ ಮಿಡಿದಿದೆ. ಇದರ ಬೆನ್ನಲ್ಲೇ ಇದೀಗ ಮಾಂತೇಶ್ ಬೀಳಗಿಯವರದ್ದು ಅಪಘಾತವಲ್ಲ, ಇದು ಮರ್ಡರ್ ಮಾಡಿದ್ದು ಎಂದು ಹೇಳಲಾಗುತ್ತಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ಬಿಗ್ ಬಾಸ್ ಮಾಜಿ ಸ್ಪರ್ಧೆ ಲಾಯರ್ ಜಗದೀಶ್ ಅವರು ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಮಾಡುತ್ತಾರೆ. ಇದೀಗ ಐಎಎಸ್ ಆಫೀಸರ್ ಮಾಂತೇಶ್ ಬೀಳಗಿ ಅವರ ಸಾವಿಗೆ ಕಂಬನಿ ಮಿಡಿದಿರುವ ಜಗದೀಶ್ ಅವರು, ಮಾಂತೇಶ್ ಅವರದ್ದು ಆಕಸ್ಮಿಕ ಅಪಘಾತವಲ್ಲ. ಇದು ಒಂದು ಮರಡರೆಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಅವರು ಮಹಂತೇಶ್ ಬೀಳಗಿ ದಕ್ಷ ಅಧಿಕಾರಿಯಾಗಿದ್ದರು. ಬಡತನದಿಂದ ಬೆಳೆದು ಬಂದು ಐಎಎಸ್ ಅಧಿಕಾರಿಯಾಗಿ ಜನರ ಪ್ರೀತಿ ಗಳಿಸಿದ್ದರು. ಅವರದ್ದು ಅಪಘಾತವಾ? ಕೊಲೆಯಾ? ಎಂದು ಜಗದೀಶ್ ಕುಮಾರ್ ಅನುಮಾನ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
Comments are closed.