Bengaluru: ATM ವಾಹನದಿಂದ ಕೋಟಿ ಕೋಟಿ ದೋಚಿದ್ದ ಖದೀಮರು ಕೊನೆಗೂ ಲಾಕ್ – ಪಕ್ಕಾ ಪ್ಲಾನ್ ಮಾಡಿದವರು ಮಾಡಿದ್ರು ಅದೊಂದು ತಪ್ಪು !

Bengaluru : ಬೆಂಗಳೂರಲ್ಲಿ ಮಟ ಮಟ ಮಧ್ಯಾಹ್ನಕೋಟಿ ಕೋಟಿ ಹಣ ತುಂಬಿಕೊಂಡು ಎಟಿಎಂಗೆ ಹಾಕಲು ಹೋಗುತ್ತಿದ್ದ ವಾಹನವನ್ನ ತಡೆದಿದ್ದ ಕದೀಮರು ಆರ್.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಸಿಬ್ಬಂದಿಗಳನ್ನ ಯಾಮಾರಿಸಿ ಬರೋಬ್ಬರಿ 7 ಕೋಟಿಯನ್ನ ಕದ್ದು ಎಸ್ಕೇಪ್ ಆಗಿದ್ರು. ಇದೀಗ ಈ ರಾಬರ್ಸ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲೂಟಿ ಮಾಡಲು ಪಕ್ಕ ಪ್ಲಾನ್ ಮಾಡಿದ್ದ ಈ ಕಳ್ಳರು ಮಾಡಿದ್ದು ಅದೊಂದೇ ತಪ್ಪು!! ಹಾಗಿದ್ರೆ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..?

ಈ ಕಳ್ಳರು ಕಳ್ಳತನಕ್ಕೆ ಬಳಸಿದ್ದು ಮೂರು ಕಾರು.. ಒಂದು ಕಾರಿನಲ್ಲಿ ಡೈರಿ ಸರ್ಕಲ್ನಲ್ಲಿ ಬಂದು ಹಣ ಕದ್ದರೆ.. ಎಸ್ಕೇಪ್ ಆಗುವಾಗ ಮಾರ್ಗ ಮಧ್ಯೆ ಮತ್ತೊಂದು ಕಾರಿಗೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.. ಮೂರನೇ ಕಾರನ್ನ ಕಳ್ಳರು ರಾಜ್ಯವನ್ನ ದಾಟೋಕೆ ಬಳಸುತ್ತಾರೆ.. ಆದ್ರೆ ಮೂರೂ ಕಾರಿನ ಮಾಹಿತಿ ಸಿಕ್ಕ ಪೊಲೀಸರು ಆ ಕಾರುಗಳ ಹಿಂದೆ ಬಿದ್ದರು.. ವಿಶೇಷವಾಗಿ ಅವರು ಹೋಗುತ್ತಿದ್ದ ಮಾರ್ಗದ ಸಿಸಿ ಕ್ಯಾಮರಾಗಳ ಮೇಲೆ ನಿಗಾ ಇಟ್ಟು ಬಲೆ ಬೀಸಿದರು. ಆಗಲೇ ನೋಡಿ ಕಳ್ಳರ ಪಿನ್ ಟು ಪಿನ್ ಇನ್ಫಾರ್ಮೇಷನ್ ಸಿಗೋದು.. ಎಲ್ಲಾ ಮಹಿತಿಯನ್ನ ಪಡೆದು ಕೊನೆಗೆ ತಿರುಪತಿಯಲ್ಲಿ ಖದೀಮರನ್ನ ಲಾಕ್ ಮಾಡಿದ್ರು. ಎಲ್ಲರಿಗೂ ಬಲೆ ಬೀಸಿದ್ರು.
Comments are closed.