Katapady: ಮಟ್ಟು ಬೀಚ್‌ ಬಳಿ ಈಜಾಡುತ್ತಿದ್ದ ವಿದ್ಯಾರ್ಥಿಗಳು: ಓರ್ವ ಸಾವು

Share the Article

Katapady: ಮಟ್ಟು ಬೀಚ್‌ ಬಳಿ ಆಟವಾಡುತ್ತ ಈಜಾಡುತ್ತಿದ್ದ 6 ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ವಿದ್ಯಾರ್ಥಿ ಸಮುದ್ರ ಪಾಲಾಗಿದ್ದು, ಸಾವಿಗೀಡಾದ ಘಟನೆ ಸೆ.20 ರ ಶನಿವಾರ ಮಧ್ಯಾಹ್ನ ನಡೆದಿದೆ.

ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ವೀರೂರುಲ್ಕರ್‌ (18) ಮೃತಪಟ್ಟ ವಿದ್ಯಾರ್ಥಿ. ಸ್ಥಳೀಯರು ಎಚ್ಚರಿಕೆ ನೀಡಿದರೂ ಈ ವಿದ್ಯಾರ್ಥಿಗಳ ತಂಡ ಇನ್ನೊಂದು ಜಾಗದಲ್ಲಿ ಈಜಾಡಿದ್ದಾರೆ. ಆಗ ಈ ದುರ್ಘಟನೆ ನಡೆದಿದೆ.

ಸ್ಥಳೀಯರಾದ ಆರ್ಯನ್‌, ಪ್ರವೀಣ್‌ ಮತ್ತಿತರರು ರಕ್ಷಣಾ ಕಾರ್ಯ ಮಾಡಿದ್ದರು. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Bangalore: ಕೆಆರ್ ಪುರಂನ ಗೋಡೆಗಳ ಮೇಲೆ ಸಮುದಾಯ ಸಹಭಾಗಿತ್ವದ ಭಿತ್ತಿಚಿತ್ರದ ಚಿತ್ತಾರ

Comments are closed.