Soujanya Case: ಸೌಜನ್ಯ ಪ್ರಕರಣಕ್ಕೆ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

Share the Article

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಕುತೂಹಲಕರ ಘಟನೆಯೊಂದು ನಡೆದಿದೆ. ಸೌಜನ್ಯ ಪ್ರಕರಣವನ್ನು ತನಿಖೆ ಕೈಗೆತ್ತಿಕೊಂಡಿದೆಯೋ ಎನ್ನುವ ಅನುಮಾನ ಶುರುವಾಗಿದೆ. ಈಗಾಗಲೇ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಹೊತ್ತು ನಂತರ ಕ್ಲೀನ್‌ಚಿಟ್‌ ಪಡೆದಿರುವ ಉದಯ್‌ ಕುಮಾರ್‌ ಜೈನ್‌ ಸೇರಿ ಧೀರಜ್‌ ಕೆಲ್ಲಾ, ಮಲ್ಲಿಕ್‌ ಜೈನ್‌ಗೆ ಎಸ್‌ಐಟಿ ಬುಲಾವ್‌ ನೀಡಿದೆ.

ಇದೀಗ ಉದಯ್‌ ಕುಮಾರ್‌ ಜೈನ್‌ ಎಸ್‌ಐಟಿ ಕಚೇರಿಗೆ ಬಂದಿದ್ದಾರೆ. ಎಸ್‌ಐಟಿ ಕಚೇರಿಗೆ ಭೇಟಿ ನೀಡುವ ಮುನ್ನ ಮಾಧ್ಯಮದ ಜೊತೆ ಮಾತನಾಡುತ್ತಾ ಉದಯ ಕುಮಾರ್‌ ಜೈನ್‌ ಅವರು, ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿನ ಮೇರೆಗೆ ಅಥವಾ ಚಿನ್ನಯ್ಯ ನೀಡಿದ ಹೇಳಿಕೆಯ ಕಾರಣದಿಂದಲೂ ನನ್ನನ್ನು ಎಸ್‌ಐಟಿ ಕರೆದಿರಬಹುದು. ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

BEML ನಲ್ಲಿ 400 ಕ್ಕೂ ಹೆಚ್ಚು ಆಪರೇಟರ್ ಹುದ್ದೆಗಳಿಗೆ ನೇಮಕಾತಿ

Comments are closed.