‘ನಾನು ನಗರ ನಕ್ಸಲೀಯ, ಬಿಜೆಪಿಗರು ನಗರ ಡಕಾಯಿತರು! ಧರ್ಮಸ್ಥಳ ಷಡ್ಯಂತ್ರ ಆರೋಪಕ್ಕೆ ಸಿ.ಎಸ್ ದ್ವಾರಕನಾಥ್ ತಿರುಗೇಟು

Share the Article

ಬೆಂಗಳೂರು: ಹೌದು, ನಾನು ನಗರ ನಕ್ಸಲೀಯ, ಒಪ್ಪಿಕೊಳ್ತೇನೆ, ಆದರೆ ಬಿಜೆಪಿಯವರು ನಗರ ಡಕಾಯಿತರು! ಧರ್ಮಸ್ಥಳದ ವಿರುದ್ಧ ಷಷ್ಯಂತ್ರ ಆರೋಪಕ್ಕೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಮತ್ತು ಹಿರಿಯ ವಕೀಲ ಸಿ.ಎಸ್ ದ್ವಾರಕನಾಥ್ ರವರು ತಿರುಗೇಟು ನೀಡಿದ್ದಾರೆ. ಧರ್ಮಸ್ಥಳಕ್ಕೆ ಕಳಂಕ ತರುತ್ತಿರುವವರು ನಗರ ನಕ್ಸಲರು, ಎಡಪಂಥೀಯರು ಎಂಬ ಬಿಜೆಪಿ ಆರೋಪಕ್ಕೆ ಅವರು ಈ ರೀತಿಯಲ್ಲಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳದ ಪ್ರಕರಣ ಎಸ್ ಐ ಟಿ ತನಿಖೆಗೆ ನೀಡಿರುವ ಹಿಂದೆ ಸಿಎಸ್ ದ್ವಾರಕನಾಥ್ ಇದ್ದಾರೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಧರ್ಮಸ್ಥಳದ ವಿರುದ್ಧದ ಆರೋಪಗಳ ಹಿಂದೆ ನಗರ ನಕ್ಸಲರ ಕೈವಾಡ ಇದೆ ಎಂದು ಹೇಳಿದ್ದರು.
“ನಕ್ಸಲೀಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರು. ಅವರು ಶಸ್ತ್ರಾಸ್ತ್ರಗಳನ್ನ ಹೊಂದಿರುವುದಕ್ಕೆ ನಮ್ಮ ವಿರೋಧ ಇತ್ತು. ಅದರ ಹೊರತಾಗಿ ನಕ್ಸಲರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಹೌದು, ನಾನು ನಗರ ನಕ್ಸಲೀಯ, ವಿಥೌಟ್ ವೆಪನ್ ನಗರ ನಕ್ಸಲೀಯ. ನಗರ ಡಕಾಯಿತರು ಅನ್ನೋದನ್ನ ಬಿಜೆಪಿಯವರು ಒಪ್ಪಿಕೊಳ್ಳಲಿ” ಎಂದು ಅವರು ಸವಾಲು ಹಾಕಿದರು.

“ಧರ್ಮಸ್ಥಳ ಪ್ರಕರಣದಲ್ಲಿ ಪುರಾವೆ ಇದೆ, ಇಲ್ಲಾ ಅಂತಾ ಹೇಳಲು ಬಿಜೆಪಿಯವರು ಯಾರು, ಅವರು ಹೇಗೆ ಹೇಳ್ತಾರೆ ? ಅವರು ಕೊಲೆ, ಅತ್ಯಾಚಾರ, ಮಿಸ್ಸಿಂಗ್ ಮಾಡಿದವರ ಪರವಾಗಿ ಮಾತನ್ನಾಡುತ್ತಿದ್ದಾರೆ. ನಾವು ಒಬ್ಬ ಬಡ ಹೆಣ್ಣು ಮಗಳ ಅತ್ಯಾಚಾರ ಖಂಡಿಸುವುದು ತಪ್ಪಾ? ಷಡ್ಯಂತ್ರ ತೆಗೆದುಕೊಂಡು ನಾವು ಏನು ಮಾಡಬೇಕು. ನಾವೇನು ಅಲ್ಲಿನ ಹುಂಡಿ ತೆಗೆದುಕೊಂಡು ಹೋಗಬೇಕಾ? ಕೊಲೆಗಡುಕರನ್ನ ರಕ್ಷಿಸಲು ಪರವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಎಸ್ಐಟಿ ತನಿಖೆ ರಚನೆ ಹಿಂದೆ ಸಿ.ಎನ್ ದ್ವಾರಕನಾಥ್ ರವರ ಒತ್ತಡ ಇತ್ತು ಎಂದು ಆರೋಪ ಬಂದಿದೆ. ನನಗೆ ಕುಮಾರಸ್ವಾಮಿ ಬಗ್ಗೆ ತುಂಬಾ ಗೌರವ ಇದೆ. ಅವರು ಸಿಎಂ ಆಗಿದ್ದಾಗ ನನಗೆ ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನ ನೀಡಿದ್ದರು. ಎಲ್ಲರನ್ನೂ ದೇವರು ನೋಡಿಕೊಳ್ಳಬೇಕು ಅಲ್ಲವೇ? ಹಾಗಾದರೆ ರೇಪಿಸ್ಟ್, ಕೊಲೆಗಡುಕರನ್ನೂ ದೇವರು ನೋಡಿಕೊಳ್ಳಬೇಕು ಅಲ್ಲವಾ ? ಧರ್ಮಸ್ಥಳದಲ್ಲಿ ಕ್ರೈಮ್ ನಡೆದಿದೆ ಎಂದು ಹೇಳೋದು ತಪ್ಪಾ?” ಎಂದು ಪ್ರಶ್ನಿಸಿದ್ದಾರೆ.

“ಹೆಣ್ಣುಮಕ್ಕಳ ಮೇಲೆ ರೇಪ್ ನಡೆದರೆ ಅದನ್ನು ಖಂಡಿಸಲೇಬಾರದೇ? ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಬೇಕು. ಕೆಲವರು ಧರ್ಮಸ್ಥಳದ ಹುಂಡಿಯನ್ನ ಕಾಯುವವರ ಪರವಾಗಿ ನಿಂತಿದ್ದಾರೆ. ಎಸ್‌ಐಟಿ ತಂಡ ಮುಕ್ತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು. ಆಗ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪಲಿದೆ. ಪ್ರಕರಣವನ್ನ ತೀರ್ಮಾನಿಸಬೇಕಿರುವುದು ನ್ಯಾಯಾಲಯ. ನಾನು ಸಿಎಂ ಮೇಲೆ ಒತ್ತಡ ಮಾಡುವಷ್ಟು ಪ್ರಭಾವಿಯಲ್ಲ. ಕಳೆದ ನಲ್ವತ್ತು ವರ್ಷಗಳಿಂದ ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ ನಡೆಯುತ್ತಿದೆ. ನ್ಯಾಯಯುತ ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಅದರಲ್ಲೂ ಮಾಸ್ಕ್ ಮ್ಯಾನ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದ. ಮಹಿಳಾ ಆಯೋಗದ ಒತ್ತಡದ ಕಾರಣದಿಂದ ತನಿಖೆಗೆ ಆದೇಶ ಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

Comments are closed.