Dharmasthala Case: ಧರ್ಮಸ್ಥಳ ಬುರುಡೆ ಕೇಸ್ ಬಿಗ್ ಎಕ್ಸ್ಕ್ಲೂಸಿವ್: ಪಾಯಿಂಟ್ 7 ರಲ್ಲಿ ಪತ್ತೆಯಾಗದ ಕಳೇಬರ
Dharmasthala Case: ಧರ್ಮಸ್ಥಳ ಬುರುಡೆ ರಹಸ್ಯದತ್ತ ಇಡೀ ಕರ್ನಾಟಕದ ಚಿತ್ತವಿದೆ. ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡುಪ್ರದೇಶದಲ್ಲಿ ಶವಗಳನ್ನು ಹೂತಿಟ್ಟಿರುವ ಕುರಿತು ಮಾಸ್ಕ್ಮ್ಯಾನ್ ನೀಡಿರುವ ದೂರಿನನ್ವರ ಮೊನ್ನೆಯಿಂದ ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ.
ನಿನ್ನೆ ಪಾಯಿಂಟ್ 6 ರಲ್ಲಿ ಕಳೇಬರದ ಅವಶೇಷ ಪತ್ತೆಯಾಗಿದ್ದು, ಇಂದು ಪಾಯಿಂಟ್ 7 ರಲ್ಲಿ ಅಗೆತ ಶುರುವಾಗಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪಾಯಿಂಟ್ 7 ರಲ್ಲಿ ಕಳೇಬರದ ಅವಶೇಷಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಇಂದು ಆಗಸ್ಟ್ 1 ರಂದು 11.30 ಗಂಟೆಯಿಂದ 1.30 ರವರೆಗೆ ದೂರುದಾರನ ಜೊತೆಗೆ ಎಸ್ಐಟಿ ತಂಡ ಘಟನಾ ಸ್ಥಳಕ್ಕೆ ಬಂದಿದ್ದು, ಮಿನಿ ಜೆಸಿಬಿಯಿಂದ ಪೌರಕಾರ್ಮಿಕರಿಂದ ಏಳನೇ ಗುರುತು ಮಾಡಿದ ಜಾಗದಲ್ಲಿ ಅಗೆತ ಶುರು ಮಾಡಲಾಗಿದ್ದು, ಕಳೇಬರ ಪತ್ತೆಯಾಗಿಲ್ಲ.
Comments are closed.