Mangalore: ನವವಿವಾಹಿತೆ ಮಹಿಳೆ ಆತ್ಮ*ಹತ್ಯೆ

Share the Article

Marodi: ಜೀವನದಲ್ಲಿ ಜಿಗುಪ್ಸೆಗೊಂಡ ನವವಿವಾಹಿತೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮರೋಡಿ ಗ್ರಾಮದಲ್ಲಿ ಶುಕ್ರವಾರ ನಡೆದಿರುವ ಕುರಿತು ವರದಿಯಾಗಿದೆ.

ಗ್ರಾಮದ ಪಚ್ಚಡಿ ಮನೆಯ ಮೂಕಾಂಬಿಕಾ ನಿಲಯದ ನಿವಾಸಿ ವಾಣಿಶ್ರೀ (26) ಮೃತಪಟ್ಟ ಮಹಿಳೆ. ಒಂದು ವರ್ಷದ ಮೂರು ತಿಂಗಳ ಹಿಂದೆ ಇವರ ವಿವಾಹ ಪ್ರಶಾಂತ್‌ ಎನ್ನುವವರ ಜೊತೆ ನಡೆದಿತ್ತು.

ವಾಣಿಶ್ರೀ ಅವರು ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿಷ ಸೇವನೆ ಮಾಡಿದ್ದಾರೆ, ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಕ್ಕದ ಮನೆಯಲ್ಲಿದ್ದ ಅವರ ದೊಡ್ಡಮ್ಮನಿಗೆ ಅನುಮಾನ ಬಂದು ಕೂಡಲೇ ವಾಣಿಶ್ರೀ ಪತಿ ಪ್ರಶಾಂತ್‌ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ. ನಂತರ ವಾಣಿಶ್ರೀ ತಂದೆ ರಾಜು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಕುಟುಂಬದ ಮಂದಿ ವಾಣಿಶ್ರೀ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಪ್ರಕರಣ ಸಂಬಂಧ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.