Belthangady: ಬೆಳ್ತಂಗಡಿ: ವಿದ್ಯುತ್ ತಂತಿಗೆ ಕೊಕ್ಕೆ ತಗುಲಿ ವ್ಯಕ್ತಿ ಮೃತ್ಯು!

Belthangady: ತೋಟದಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ಕೊಕ್ಕೆ ಹೆಚ್.ಟಿ. ವಿದ್ಯುತ್ ಲೈನ್ ಗೆ ತಾಗಿ ವಿದ್ಯುತ್ ತಗುಲಿದ ಪರಿಣಾಮ ಮೃತಪಟ್ಟ ಘಟನೆ ಬೆಳ್ತಂಗಡಿಯ ಅರಸಿನಮಕ್ಕಿ ಎಂಜಿರ ಎಂಬಲ್ಲಿ ನಡೆದಿದೆ.

ಉಡೈರೆ ಕೃಷ್ಣಪ್ಪ ಕುಲಾಲ್ (49) ವಿದ್ಯುತ್ ಆಘಾತಕ್ಕೊಳಗಾಗಿ ಮೃತ ಪಟ್ಟ ವ್ಯಕ್ತಿ. ವಿದ್ಯುತ್ ಆಘಾತಕ್ಕೆ ಈಡಾದ ಕೂಡಲೇ ಕೃಷ್ಣಪ್ಪ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ;Puttur: ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿಗಳನ್ನು ರಕ್ಷಿಸಿದ ಪುತ್ತೂರಿನ ಸ್ನೇಕ್ ತೇಜಸ್!
Comments are closed.