Liquor Scam: ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಬೆಂಗಳೂರು ಏರ್ಪೋರ್ಟ್ನಲ್ಲಿ ಬಂಧನ

Liquor Scam: ಆಂಧ್ರಪ್ರದೇಶ ಅಬಕಾರಿ ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿಯನ್ನು ಬಂಧನ ಮಾಡಲಾಗಿದೆ.

ಆಂಧ್ರ ಪೊಲೀಸರು ಚೆವಿ ರೆಡ್ಡಿ ಮೇಲೆ ಕೋಟ್ಯಂತರ ರೂ. ಲಿಕ್ಕರ್ ಹಗರಣದ ಆರೋಪದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಇಂದು ಅವರು ಬೆಳಗ್ಗೆ ಬೆಂಗಳೂರು ಏರ್ಪೋರ್ಟ್ ಮುಖಾಂತರ ಶ್ರೀಲಂಕಾಗೆ ಎಸ್ಕೇಪ್ ಆಗಲು ಯತ್ನ ಮಾಡುವ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪೊಲೀಸರು ಚೆವಿ ರೆಡ್ಡಿಯನ್ನು ಬಂಧನ ಮಾಡಿದ್ದಾರೆ.
Comments are closed.