Interesting Fact: ನದಿಗಳಿಗೆ ನಾಣ್ಯ ಎಸೆಯಲು ಹಿಂದೆ ಇತ್ತು ಆ ಒಂದು ವೈಜ್ಞಾನಿಕ ಕಾರಣ!!

Intresting Fact: ಯಾವುದಾದರೂ ಪುಣ್ಯಕ್ಷೇತ್ರಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿರುವ ನದಿ ಅಥವಾ ಕೆರೆ, ಬಾವಿಗಳಿಗೆ ನಾಣ್ಯಗಳನ್ನು ಎಸೆಯುವುದನ್ನು, ಎಸೆಯುತ್ತಿರುವುದನ್ನು ನೋಡಿರುತ್ತೇವೆ. ಇಲ್ಲ ಕೆಲವೊಮ್ಮೆ ನಾವೇ ಎಸೆದು ಬಂದಿರುತ್ತೇವೆ. ಹೀಗೆ ಎಸೆಯಲು ಕಾರಣ ಏನೆಂದು ಕೇಳಿದಾಗ ನಮಗೆ ಅದು ತಿಳಿದಿರುವುದಿಲ್ಲ. ಏನೋ ಒಂದು ದೇವರ ಮೇಲಿನ ನಂಬಿಕೆ ಎಂದು ಈ ರೀತಿ ಮಾಡಿರುತ್ತೇವೆ. ಆದರೆ ಹೇಗೆ ನಾಣ್ಯವನ್ನು ನದಿಗಳಿಗೆ ಅಥವಾ ಕೆರೆಬಾವಿಗಳಿಗೆ ಎಸೆಯಲು ಹಿಂದೆ ಒಂದು ವೈಜ್ಞಾನಿಕ ಕಾರಣವಿತ್ತು.
ಶತಮಾನಗಳ ಹಿಂದೆ ಆರಂಭಗೊಂಡ ನಾಣ್ಯಗಳನ್ನು ನದಿಗೆ ಎಸೆಯುವ ಈ ಕ್ರಿಯೆಯ ಹಿಂದಿನ ವೈಜ್ಞಾನಿಕ ಕಾರಣ ಹೀಗಿದೆ. ಮೊದಲು ಹಿಂದಿನ ದಿನಗಳಲ್ಲಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು. ತಾಮ್ರದ ಧಾತುವಿನಿಂದ ಮಾನವನ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. ತಾಮ್ರದ ಬಿಂದಿಗೆಗಳಲ್ಲಿ ಶೇಖರಿಸುವ ಮೂಲಕ ನೀರು ಶುದ್ಧಗೊಳ್ಳುತ್ತದೆ ಎಂದು ಪ್ರಾಚೀನ ಆಯುರ್ವೇದ ತಿಳಿಸುತ್ತದೆ. ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆ (ಇಪಿಎ) ತಾಮ್ರ ಹಾಗೂ ಹಿತ್ತಾಳೆಯಂಥ ತಾಮ್ರದ ಮಿಶ್ರಲೋಹಗಳು 99.9%ನಷ್ಟು ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ಎರಡು ಗಂಟೆಗಳಲ್ಲಿ ಕೊಲ್ಲುತ್ತವೆ ಎಂದು ತಿಳಿಸಿದೆ. ತಾಮ್ರದ ಈ ಶುದ್ಧೀಕರಣದ ಗುಣದ ಕಾರಣದಿಂದ ನಮ್ಮ ಹಿರೀಕರು ನದಿಗಳಿಗೆ ನಾಣ್ಯಗಳನ್ನು ಎಸೆಯುವ ಮೂಲಕ ನದಿಗಳಲ್ಲಿ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಬಯಸುತ್ತಿದ್ದರು.
ಜಲಾಗಾರಗಳನ್ನು ಸೋಂಕು ಮುಕ್ತವಾಗಿಸಲೆಂದು ಈ ಸಂಪ್ರದಾಯವನ್ನು ಶತಮಾನಗಳ ಕಾಲ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ದಿನಗಳಲ್ಲಿ ಟಂಕಿಸಲಾಗುವ ನಾಣ್ಯಗಳನ್ನು ಬೇರೆಯದ್ದೇ ಲೋಹಗಳಿಂದ ಮಾಡಲ್ಪಟ್ಟರೂ ಸಹ ನಾವು ಅದೇ ಸಂಪ್ರದಾಯವನ್ನು ಪಾಲಿಸಿಕೊಂಡು ಸಾಗುತ್ತಿದ್ದೇವೆ. ಹೀಗಾಗಿ, ನದಿಗಳಿಗೆ ನಾಣ್ಯ ಎಸೆಯುವುದರ ಹಿಂದಿನ ನಿಜ ಉದ್ದೇಶ ಹೀಗೆ ಕಾಲಗರ್ಭದಲ್ಲಿ ಅಡಗಿ ಹೋಗಿದೆ.
Comments are closed.