Islamabad: ಬಾರಿ ನಷ್ಟದಲ್ಲಿರುವ ಭಾರತ: ಯುದ್ಧದ ಸಾಧ್ಯತೆ ಕಡಿಮೆ ಎಂದ ಪಾಕ್ ಸಚಿವ

Share the Article

Islamabad: ಈಗಾಗಲೇ ಪೆಹಲ್ಗಾಮ್ ದಾಳಿಯ ವಿರುದ್ಧ ಭಾರತವು ಪಾಕ್ ಗೆ ಪಾಠ ಕಲಿಸಿದ್ದು, ಇದೀಗ ಪಾಕ್ ನ ಸಚಿವ ಇಶಾಕ್ ದಾರ್ ಭಾರತ ಸಂಪೂರ್ಣ ನಷ್ಟದಲ್ಲಿರುವ ಕಾರಣ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಆತ ಗಡಿಯಲ್ಲಿ ಉಂಟಾದ ಬಾರಿ ನಷ್ಟದಿಂದಾಗಿ, ಶಾಂತಿ ಮಾತುಕತೆಗೆ ಕರೆದರೂ ಕೂಡ ಭಾರತ ಮನಸ್ಸು ಮಾಡುತ್ತಿಲ್ಲ ಎಂದಿದ್ದಾರೆ ಹಾಗೂ ಭಾರತದ ಎಲ್‌ಒಸಿ ಬಳಿ ಗಡಿಯಾಚೆಗಿನ ಭಯೋತ್ಪಾದನೆ ಕಾರ್ಯಾಚರಣೆ ವೇಳೆ ಭಾರೀ ನಷ್ಟ ಅನುಭವಿಸಿದೆ ಅನ್ನೋ ಮಾಹಿತಿಗಳು ಬಂದಿದ್ದರೂ ಕೂಡ ಪಾಕಿಸ್ತಾನದ ಉತ್ತನ ಅಧಿಕಾರಿಗಳು ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆಗಳನ್ನ ನೀಡಿಲ್ಲ ಎಂದು ಹೇಳಿದ್ದಾರೆ.

ಜಟ್ಟಿ ಜಾರಿ ಬಿದ್ದರೂ ಕೂಡ ಮೀಸೆ ಮಣ್ಣು ಆಗಲಿಲ್ಲ, ಈಗಲೂ ಕೂಡ ಪಾಕಿಸ್ತಾನ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾ ತನ್ನ ಪ್ರಜೆಗಳಿಗೆ ಮಣ್ಣು ಮುಕ್ಕಿಸುತ್ತಿದೆ ಎಂದರೆ ತಪ್ಪಾಗಲಾರದು.

Comments are closed.