Governor: ಲಿಫ್ಟ್ ನಲ್ಲಿ ಸಿಲುಕಿ ಪರದಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್!!

Share the Article

Governor: ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಲಿಫ್ಟಿನಲ್ಲಿ ಸಿಲುಕಿ ಹಾಕಿಕೊಂಡು ಕೆಲಕಾಲ ಪರದಾಡಿದಂತಹ ಘಟನೆ ನಡೆದಿದೆ.

ಹೌದು, ಕರ್ನಾಟಕ ಮುಕ್ತ ವಿವಿಯಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗವರ್ನರ್ ಅವರು ಲಿಫ್ಟ್​​ನಲ್ಲಿ ತೆರಳುವಾಗ ಓವರ್​ ಲೋಡ್​​​​ನಿಂದಾಗಿ​​ ಲಿಫ್ಟ್ ಅರ್ಧಕ್ಕೆ ಸ್ಥಗಿತಗೊಂಡಿದೆ. ಲಿಫ್ಟ್​ ಕೈಕೊಟ್ಟಿದ್ದರಿಂದ ರಾಜ್ಯಪಾಲರು ಮತ್ತವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಕೆಲಕಾಲ ಲಿಫ್ಟ್​​ನಲ್ಲೇ ಸಿಲುಕಿ ಸುಸ್ತಾದರು.

ಕೂಡಲೇ ಕೆಲ ಸಿಬ್ಬಂದಿಯನ್ನು ಕೆಳಗಿಳಿಸಿದ ಬಳಿಕ ಲಿಫ್ಟ್ ಮತ್ತೆ ಚಾಲನೆಗೊಂಡಿತು. ನಂತರ ಗವರ್ನರ್​ ಅವರು ಲಿಫ್ಟ್​ ಸಹವಾಸವೇ ಬೇಡವೆಂದು ನಡೆದುಕೊಂಡು ಸಾಗಿದರು ಎಂದು ತಿಳಿದುಬಂದಿದೆ.

Comments are closed.