Kasaragod: ಕಾಸರಗೋಡು: ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಸಾವು

Kasaragod: ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಬದಿಯಡ್ಕ ಸಮೀಪದ ಕನ್ಯಾಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಕನ್ಯಾಪಾಡಿಯ ಉನೈಸ್ (19) ಮೃತ ದುರ್ದೈವಿ.

ಬೆಂಗಳೂರು ವೈಟ್ ಫೀಲ್ಡ್ ನ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಯುವಕನು ಈ ಕಟ್ಟಡದ ನೌಕರನಾಗಿದ್ದನು. ಯುವಕ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದನು. ಮೃತದೇಹವನ್ನು ಊರಿಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದುಬಂದಿದೆ.
Comments are closed.