Udupi: ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಮಾಲೀಕ: ಪ್ರಕರಣ ದಾಖಲು

Share the Article

Udupi: ಬೈಂದೂರಿನಲ್ಲಿ ತಾನು ಸಾಕಿದ ನಾಯಿಯನ್ನು ಬೈಕಿನಲ್ಲಿ ಕಟ್ಟಿ ದರದನೆ ಎಳೆದೊಯ್ಯುತ್ತಿರುವ ಘಟನೆಯೊಂದು ನಡೆದಿದೆ. ಶನಿವಾರ ಸಂಜೆ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಯಿಯನ್ನು ಬೈಕಿನಲ್ಲಿ ಕಟ್ಟಿ ಸುಮಾರು 2 ಕಿ.ಮಿ. ಎಳೆದು ಕೊಂಡು ಹೋಗಿದ್ದು, ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.ಈ ಘಟನೆಯ ಕುರಿತಾಗಿ ಬೈಂದೂರು ಪೊಲೀಸರು ಆತನ ವಿರುದ್ದ  ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯು ಪಡುವರಿ ನಿವಾಸಿ ಸುಬ್ರಹ್ಮಣ್ಯ ಎಂದು ತಿಳಿದು ಬಂದಿರುತ್ತದೆ. ಪೊಲೀಸರು ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

ಬೈಂದೂರು ತಾಲೂಕು ಯಡ್ತರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು – ಕುಂದಾಪುರ ಒನ್ ವೇ ರಸ್ತೆಯ ಪೂರ್ವ ಬದಿಯ ಸರ್ವೀಸ್‌ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ನಿವಾಸಿಯೋರ್ವ ನಾಯಿಯೊಂದನ್ನು ಆತನ ಬೈಕ್ ಗೆ ಕಟ್ಟಿ ಹೋಗುತ್ತಿರುವ ವಿಡಿಯೋ ಇಂದು ದಿನಾಂಕ 25-05-2025 ರಂದು ಯುಟ್ಯೂಬ್‌ನಲ್ಲಿ ಕಾಣಸಿಕ್ಕಿರುತ್ತದೆ.

ಆ ಬೈಕ್ ನಂಬರ್ KA 20 L 5450 ಆಗಿದ್ದು, ಆ ವ್ಯಕ್ತಿಯ ಹೆಸರು ವಿಳಾಸ ಪಡುವರಿ ಗ್ರಾಮ, ಬೈಂದೂರು ಎಂಬುದಾಗಿ ತಿಳಿದು ಬಂದಿದ್ದು, ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕ ರೀತಿಯಲ್ಲಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋ ವೀಕ್ಷಣೆಯಿಂದ ಕಂಡು ಬರುತ್ತದೆ. ಈತನ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ಬೈಂದೂರು ಪೊಲೀಸ್ ಠಾಣಾ ಅಪರಾಧ ಪ್ರಕರಣ 109/2025 ಕಲಂ 325 BNS and 11 (1)(D) Prevention of Cruelty to animal act 1960 ರಂತೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Comments are closed.