Rakesh Poojary: ರಾಕೇಶ್ ಪೂಜಾರಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ದರ್ಶನ್ ಮಾಡಿದ್ದೇನು?

Rakesh Poojary: ಇಡೀ ಕನ್ನಡ ನಾಡಿನ ಜನತೆಯನ್ನು ಕಾಮಿಡಿ ಮೂಲಕ ನಕ್ಕು ನಲಸಿದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ನೆನ್ನೆ ತಾನೇ ಹೃದಯಘಾತದಿಂದ ನಮ್ಮೆಲ್ಲರನ್ನು ಅಗಲಿದ್ದಾರೆ. ಈ ವೇಳೆ ಕಾಮಿಡಿ ಕಿಲಾಡಿ ಕುಟುಂಬ ಹಾಗೂ ನಾಡಿನ ಹಿರಿಯ ಕಲಾವಿದರು ಸಂತಾಪಸೂಚಿಸಿದ್ದಾರೆ. ಅಂತೆಯೇ ರಾಕೇಶ್ ಪೂಜಾರಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟಿ ರಕ್ಷಿತ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಅವರು ಕೂಡ ರಾಕೇಶ್ ಮನೆಗೆ ಬಂದು ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ರಕ್ಷಿತಾ ಪ್ರೇಮ್ ರಾಕೇಶ್ ನಿಧನ ಆಘಾತವನ್ನುಂಟುಮಾಡಿದೆ, ಆತ ಒಳ್ಳೆಯ ಹುಡುಗ ಎಂದು ಕಣ್ಣೀರಿಡುತ್ತಾ ಹೇಳಿದರು. ರಾಕೇಶ್ ತಂದೆ ಎರಡು ವರ್ಷಗಳ ಹಿಂದಷ್ಟೇ ಸಾವನ್ನಪ್ಪಿದ್ದು, ಮನೆಗೆ ರಾಕೇಶ್ ಆಧಾರವಾಗಿದ್ದ ಎಂದರು. ಅಲ್ಲದೇ ತಮ್ಮ ಜೊತೆಗಿನ ಫೋಟೊವನ್ನೇ ಈ ಹಿಂದಿನಿಂದಲೂ ಡಿಪಿ ಆಗಿ ಇಟ್ಟುಕೊಂಡಿದ್ದ, ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ದರ್ಶನ್ ಸಹ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದರು ಎಂದು ರಕ್ಷಿತಾ ತಿಳಿಸಿದರು.
Comments are closed.