Shrinagara: ಲಷ್ಕರ್-ಎ-ತೈಬಾ ಟಾಪ್ ಉಗ್ರ ಎನ್ಕೌಂಟರ್ಗೆ ಬಲಿ!

Shrinagara: ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ ಟಾಪ್ ಕಮಾಂಡರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ. ಪಹಲ್ಗಾಮ್ ದಾಳಿಯ ನಂತರ ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆ ತೀವ್ರಗೊಂಡಿದೆ. ಅಲ್ತಾಫ್ ಲಲ್ಲಿ ಟಾಪ್ ಕಮಾಂಡರ್ ಆಗಿದ್ದು, ಈತ ಉಗ್ರ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ. ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿಯನ್ನು ಪಡೆದ ನಂತರ ಎನ್ಕೌಂಟರ್ನಲ್ಲಿ ಅಲ್ತಾಫ್ ಲಲ್ಲಿ ಹತ್ಯೆಯಾಗಿದ್ದಾನೆ.
ಈ ಕಾರ್ಯಾಚರಣೆ ಸಂದರ್ಭ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಶ್ರೀನಗರಕ್ಕೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಆಗಮಿಸಿದ್ದಾರೆ.
Comments are closed.