KPCC: ಹಿಜಾಬ್ ವಿಚಾರ ಬಂದ್ರೆ ಮುಂದಿರುವ ಕಾಂಗ್ರೆಸ್ ಜನಿವಾರ ಸುದ್ದಿ ಬಂದಾಗ ಸುಮ್ಮನಿರುವುದೇಕೆ? ಕೆಪಿಸಿಸಿ ಕಾರ್ಯದರ್ಶಿಯೇ ಅಸಮಾಧಾನ

Share the Article

KPCC: ರಾಜ್ಯದಲ್ಲಿ ಜನಿವಾರ ವಿಚಾರ ಭಾರಿ ಸದ್ದು ಮಾಡುತ್ತಿದೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿ ge ಪರೀಕ್ಷೆ ಬರೆಯಲು ಅವಕಾಶಕೊಡದ ವಿಚಾರ ಹಾಗೂ ಜನಿವಾರ ತೆಗೆಸಿದ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇಡೀ ಬ್ರಾಹ್ಮಣ ಸಮಾಜವೇ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಆಗಿದೆ. ಇಷ್ಟಾದರೂ ರಾಜ್ಯದಲ್ಲಿ ಆಗುವ ದೇಶದ ಕಾಂಗ್ರೆಸ್ ನಾಯಕರು ಸುಮ್ಮನಿದ್ದಾರೆ. ಇದೀಗ ಈ ಕುರಿತಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕಾನಾಥ್‌ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕಾನಾಥ್‌ ಸ್ವಪಕ್ಷೀಯರ ವಿರುದ್ಧವೇ ಹಿಜಾಬ್‌ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವಾಗ ಮುಂಚೂಣಿಯಲ್ಲಿದ್ದ ನಮ್ಮ ಪಕ್ಷದ ನಾಯಕರು, ಬ್ರಾಹ್ಮಣರಿಗೆ ಅಪಮಾನವಾದಾಗ ಏಕೆ ಸುಮ್ಮನಿದ್ದಾರೆಂದು ನನಗೆ ಅಚ್ಚರಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿಯೂ ಆದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, ಘಟನೆ ಸಂಬಂಧ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರೂ ತಪ್ಪಿತಸ್ಥರ ವಿರುದ್ಧ ಈವರೆಗೂ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ. ಇದು ಇಡೀ ರಾಜ್ಯ ಮತ್ತು ದೇಶದ ಬ್ರಾಹ್ಮಣ ಸಮುದಾಯಕ್ಕೆ ಮಾಡಿರುವ ಅವಮಾನ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬ್ರಾಹ್ಮಣರಿಗೆ ಅಪಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಅಲ್ಲದೆ ನಾನು ಈ ಪತ್ರವನ್ನು ತಮಗೆ ತೀರ ಬೇಸರದಿಂದ ಬರೆಯುತ್ತಿದ್ದೇನೆ. ನಾನು ಬೇರೆ ಜಾತಿ ಧರ್ಮಗಳ ಬಗ್ಗೆ ಮಾತಾಡುವುದು ಸರಿಯಲ್ಲ. ಆದರೆ ಮತ್ಯಾರಿಗೆ ಆದರೂ ಈ ರೀತಿಯ ಘಟನೆ ನಡೆದಿದ್ದರೆ ಸರ್ಕಾರದ ನಿಲುವು ಏನಾಗುತ್ತಿತ್ತು. ಹಿಜಾಬ್ ವಿಷಯದಲ್ಲಿ ನಮ್ಮ ಪಕ್ಷ ಸಾಕಷ್ಟು ಮುಂಚೂಣಿಯಲ್ಲಿತ್ತು. ಆದರೆ ಬ್ರಾಹ್ಮಣರಿಗೆ ಅಪಮಾನವಾದಾಗ ಎಲ್ಲರೂ ಏಕೆ ಸುಮ್ಮನಿದ್ದಾರೆ? ಕೂಡಲೆ ಬೀದರ್ ಜಿಲ್ಲಾಧಿಕಾರಿಗಳಿಗೆ ತಾವು ಆದೇಶ ಕೊಟ್ಟು ಇಂಥ ನೀಚ ಕೆಲಸ ಮಾಡಿದಂತಹ ವ್ಯಕ್ತಿಗೆ ಶಿಕ್ಷೆ ಆಗಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಅಲ್ಲದೆ, ಈ ವಿಷಯದಲ್ಲಿ ಸರ್ಕಾರದ ನಿಲುವು ಏನೆಂಬುದು ಕೂಡ ಸರಿಯಾಗಿ ನಮಗೆ ತಿಳಿದು ಬಂದಿಲ್ಲ. ಸರ್ಕಾರದ ನಿಲುವನ್ನೂ ತಿಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬ್ರಾಹ್ಮಣರಿಗೆ ಯಜ್ಞೋಪವೀತ (ಜನಿವಾರ) ಪರಮ ಪವಿತ್ರವಾದಂತಹ ಒಂದು ವಸ್ತು. ಒಬ್ಬ ಹುಡುಗನಿಗೆ ಗಾಯತ್ರಿ ಮಂತ್ರ ಉಪದೇಶ ಮಾಡಿ ಸಂಸ್ಕಾರ ಕೊಟ್ಟು ಅವನಿಂದ ಸಮಾಜಕ್ಕೆ ಒಳ್ಳೆಯದಾಗಲೆಂದು ಮಾಡುವಂತಹ ಒಂದು ಕ್ರಿಯೆ ಇದು. ಇಂತಹ ಪವಿತ್ರ ವಸ್ತುವನ್ನು ವಿನಾ ಕಾರಣ ತೆಗೆಸಿ ಬೇಕಂತಲೇ ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಬೇಕೆಂದು ಮಾಡಿರುವಂತಹ ಕೃತ್ಯಕ್ಕೆ ನಮ್ಮ ಧಿಕ್ಕಾರ ಎಂದಿದ್ದಾರೆ.

Comments are closed.