Karnataka Rain: ಕರಾವಳಿಯಲ್ಲಿ ಇಂದು (ಎ.21) ರಂದು ಯಲ್ಲೋ ಅಲರ್ಟ್-ಹವಾಮಾನ ಇಲಾಖೆ!

Karnataka Rain: ಇಂದು ಭಾರೀ ಮಳೆಯ ಸಂಭವವಿದ್ದು, ಕರಾವಳಿ ಭಾಗದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಎ.21 ರಂದು ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರ (ನಿನ್ನೆ) ಮಳೆಯಾಗಿದ್ದು, ತಾಪಮಾನ 33.1 ಡಿ.ಸೆ. ದಾಖಲಾಗಿದೆ.
Comments are closed.