Mangaluru : ಸಾಮೂಹಿಕ ಅತ್ಯಾಚಾರ ಪ್ರಕರಣ – ಮಧ್ಯರಾತ್ರಿ ಮನೆಗಳ ಬಾಗಿಲು ತಟ್ಟಿ ಯುವತಿ ಹೇಳಿದ್ದೇನು?

Share the Article

Mangaluru : ಮಂಗಳೂರಿನ ಹೊರವಲಯದ ಕಲ್ಲಾಪು ಬಳಿ ತಡರಾತ್ರಿ ಸ್ಥಳೀಯರ ಮನೆಯ ಬಾಗಿಲು ಬಡಿದು, ನೀರು ಕೇಳಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶಂಕಿಸಲಾಗಿ ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಕಲ್ಲಾಪು ಬಳಿ ತಡರಾತ್ರಿ ಅನ್ಯ ರಾಜ್ಯದ ಯುವತಿ ಒಬ್ಬಳು ಮನೆಯೊಂದರ ಬಾಗಿಲು ಬಡಿದು ನೀರು ಕೇಳಿ ಕುಸಿದು ಬಿದ್ದಿದ್ದಳು. ಈ ವೇಳೆ ಯುವತಿಯ ಮೈಮೇಲೆ ಗಾಯಗಳಾಗಿದ್ದವು. ಈ ವೇಳೆ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣೆ ಪೊಲೀಸರು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದ್ದು, ಆಟೋ ಚಾಲಕ ಹಾಗೂ ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಬಯಲಾಗಿದೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದರೊಂದಿಗೆ ಸ್ಥಳೀಯರು ರಾತ್ರಿ ವೇಳೆ ಯುವತಿ ಮನೆ ಬಾಗಿಲು ಬಡಿದು ಏನು ಹೇಳಿದ್ದಳು ಎಂಬುದಾಗಿ ತಿಳಿಸಿದ್ದಾರೆ. ಯುವತಿ ತಡ ರಾತ್ರಿ ಮನೆಗಳ ಬಾಗಿಲು ಬಡಿಯುತ್ತಿದ್ದಳು. ಬಾಗಿಲು ತೆಗೆದು ಹೊರಬಂದು ನೋಡಿದರೆ ಈಕೆ ಅರೆಪ್ರಜ್ಞಾಸ್ಥಿತಿಯಲ್ಲಿ ಇದ್ದಳು. ಇವಳು ಒಂಥರ ಅಮಲು ಏರಿದಂತೆ ಕಾಣಿಸುತ್ತಿದ್ದಳು. ಅಷ್ಟೇ ಅಲ್ಲ, ಮೈಮೇಲೆ ಪರಚಿದ ಗಾಯಗಳು ಇದ್ದವು. ಹಿಂದಿಯಲ್ಲಿ ಮಾತನಾಡುತ್ತಿದ್ದಳು. ʼಮೂವರು ನನ್ನನ್ನ ಆಟೋದಲ್ಲಿ ಕರೆತಂದರು. ನನಗೆ ಮದ್ಯಪಾನ ಮಾಡಿಸಿದ್ದಾರೆʼ ಎಂದು ಹೇಳಿ ನನಗೆ ಕುಡಿಯಲು ನೀರು ಬೇಕು ಎಂದು ಸ್ಥಳೀಯರ ಬಳಿ ಅಂಗಲಾಚಿದಳು. ಅಷ್ಟು ಹೇಳಿ ಸ್ಥಳದಲ್ಲೇ ಕುಸಿದಬಿದ್ದಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ

Comments are closed.