Mangaluru: ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ದ್ವೇಷ ಭಾಷಣಕ್ಕೆ ನಿಷೇಧ: ದೈವದ ತೀರ್ಪು!

Mangaluru: ಕೊರಗಜ್ಜನ ಆದಿಕ್ಷೇತ್ರದಲ್ಲಿ (Mangaluru) ದ್ವೇಷ, ಕೋಮುವಾದದ ಭಾಷಣಗಳಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ ಎಂದು ದೈವದ ತೀರ್ಪು ಬಂದಿದೆ. ಕರಾವಳಿಯ ಸಾಂಪ್ರದಾಯಿಕ ‘ಸತ್ಯ ಧರ್ಮ’ದ ಪ್ರಕಾರ, ದೈವಾರಾಧನೆಯ ಕ್ಷೇತ್ರಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಮಾನತೆಯನ್ನು ಬೆಳೆಸುವ ಸ್ಥಳಗಳಾಗಿವೆ. ಇಲ್ಲಿ ದ್ವೇಷವನ್ನು ಹರಡುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಕೊರಗಜ್ಜನ ಕೋಲದಲ್ಲಿ ಸ್ಪಷ್ಟಪಡಿಸಲಾಗಿದೆ.
ದ್ವೇಷ ಭಾಷಣದ ವಿವಾದ
ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ತ್ (ವಿಹಿಂಪ) ನಡೆಸಿದ ‘ಕೊರಗಜ್ಜನೆಡೆ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಎಂಬ ವಕ್ತೆ, “ಲವ್ ಜಿಹಾದ್ ವಿರುದ್ಧ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾಗಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಮತ್ಸರವನ್ನು ಹುಟ್ಟುಹಾಕಬಹುದಾದ ಹೇಳಿಕೆ ಎಂದು ಸ್ಥಳೀಯರು ಮತ್ತು ಭಕ್ತರಿಂದ ಟೀಕೆ ಬಂದಿತ್ತು.
ಈ ಪ್ರಸ್ತಾಪ ಕೊರಗಜ್ಜನ ಕೋಲದ (ದೈವೋತ್ಸವ) ಸಮಯದಲ್ಲಿ ಮುಂದೆ ಬಂದಿತು. ದೈವದ ಪರಂಪರೆಯನ್ನು ರಾಜಕೀಯ ಅಥವಾ ಸಾಮುದಾಯಿಕ ದ್ವೇಷಕ್ಕೆ ಬಳಸಲು ಅನುಮತಿಸಲಾಗದು ಎಂಬುದು ಭಕ್ತರ ಆಗ್ರಹವಾಗಿತ್ತು.
ದೈವದ ತೀರ್ಪು: “ದ್ವೇಷ ಭಾಷಣಕ್ಕೆ ಇಲ್ಲಿ ಸ್ಥಾನವಿಲ್ಲ”
ಕೊರಗಜ್ಜ ದೈವವು ತುಳು ಭಾಷೆಯಲ್ಲಿ ತನ್ನ ತೀರ್ಪನ್ನು ನೀಡುತ್ತಾ, “ನನ್ನ ಕ್ಷೇತ್ರವನ್ನು ದ್ವೇಷದ ಮಾತುಗಳಿಂದ ಅಪವಿತ್ರಗೊಳಿಸಬೇಡಿ. ಯಾರು ಹೀಗೆ ಮಾಡುತ್ತಾರೋ, ಅವರನ್ನು ನಾನು ಮಾಯೆಯಲ್ಲಿ ನೋಡಿಕೊಳ್ಳುತ್ತೇನೆ. ಇನ್ನುಮುಂದೆ ಇಲ್ಲಿ ಭಕ್ತರು ಬರಲು ಸ್ವಾಗತ, ಆದರೆ ದ್ವೇಷ ಭಾಷಣಕಾರರಿಗೆ ಅವಕಾಶ ಇಲ್ಲ” ಎಂದು ಘೋಷಿಸಿತು.
ಈ ತೀರ್ಪಿನ ನಂತರ, ವಿಹಿಂಪ್ ಸಂಘಟನೆ ತನ್ನ ವಾರ್ಷಿಕ ‘ಕೊರಗಜ್ಜನೆಡೆ ನಮ್ಮ ನಡೆ’ ಕಾರ್ಯಕ್ರಮವನ್ನು ಇನ್ನು ಮುಂದೆ ನಡೆಸುವುದಿಲ್ಲ ಎಂದು ತಿಳಿಸಿದೆ.
Comments are closed.