Belthangady: ಬೈಕ್ – ರಿಕ್ಷಾ ಅಪಘಾತ; ಯುವಕ ಆಸ್ಪತ್ರೆಗೆ ದಾಖಲು!

Belthangady: ಬೈಕ್-ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಉಜಿರೆಯ ಇಂಡಿಯಲ್ ಪೆಟ್ರೋಲ್ ಪಂಪ್ ಹತ್ತಿರ ಎ.16 ರಂದು ನಡೆದಿದೆ.
ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಜಿರೆಯಿಂದ ಚಾರ್ಮಾಡಿ ಕಡೆಗೆ ಪ್ರಯಾಣ ಮಾಡುತ್ತಿದ್ದ ರಿಕ್ಷಾ, ಅನುಗ್ರಹದಿಂದ ಉಜಿರೆಗೆ ಪ್ರಯಾಣ ಮಾಡುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ.
ಪೆಟ್ರೋಲ್ ಪಂಪ್ ಕಡೆಗೆ ತಿರುಗಿಸುವ ವೇಳೆ ರಿಕ್ಷಾಗೆ ಎದುರಿನಿಂದ ಬಂದ ಬೈಕ್ ಗುದ್ದಿದೆ. ಪರಿಣಾಮ ರಿಕ್ಷಾದ ಮುಂಭಾಗ, ರಿಕ್ಷಾ ಸವಾರನಿಗೆ ಗಂಭೀರ ಗಾಯವಾಗಿದ್ದು, ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೈಕ್ ಸವಾರ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಹಾಸನ ಮೂಲದವರ ರಿಕ್ಷಾ ಎಂದು ವರದಿಯಾಗಿದೆ.
ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Comments are closed.