Vishu kani: ವಿಷು ಹಬ್ಬ: ಇಂದು ಕರಾವಳಿಗರಿಗೆ ಹೊಸವರ್ಷದ ಸಂಭ್ರಮ!

Vishu kani: ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಿಷು ಹಬ್ಬವನ್ನು ಹೊಸ ವರ್ಷದ ಆಚರಣೆಯಾಗಿ ಆಚರಿಸಲಾಗುತ್ತದೆ. ವಿಷುವತ್ ಸಂಕ್ರಾಂತಿಯನ್ನು ಸೂಚಿಸುವ ಈ ಹಬ್ಬದಲ್ಲಿ ವಿಷುಕಣಿ (Vishu kani) ಪ್ರಮುಖ ಆಚರಣೆಯಾಗಿದೆ. ಶ್ರೀಕೃಷ್ಣನ ವಿಜಯೋತ್ಸವವನ್ನೂ ಇದು ಸೂಚಿಸುತ್ತದೆ.
ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ ಕೆಲವು ಕಡೆ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಈ ಸೌರಮಾನ ಯುಗಾದಿಯನ್ನೇ ಬಿಸು, ವಿಷು ಎಂದು ಕರೆಯಲಾಗುತ್ತದೆ. ವಿಷು ಎಂಬ ಹೆಸರು ವಿಷುವತ್ ಸಂಕ್ರಾಂತಿ ಎಂಬ ಹೆಸರಿನಿಂದ ಬಂದಿದೆ. ಖಗೋಳಶಾಸ್ತ್ರದ ಪ್ರಕಾರ, ವಿಷುವತ್ ಸಂಕ್ರಾಂತಿ ಎಂದರೆ ಸೂರ್ಯನು ಆಕಾಶ ಸಮಭಾಜಕ ವೃತ್ತವನ್ನು ದಾಟುವ ವಿದ್ಯಮಾನ.
ವಿಷು ಎಂದರೇನು?
ವಿಷುವನ್ನು ಮಲಯಾಳಿಗರ ಹೊಸ ವರ್ಷ ಎಂದೂ ಕರೆಯುತ್ತಾರೆ . “ವಿಶು” ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ಇದರ ಅರ್ಥ ಸಮಾನ, ಏಕೆಂದರೆ ಹಗಲು ಮತ್ತು ರಾತ್ರಿ ಬಹುತೇಕ ಸಮಾನವಾಗಿರುವ ಸಮಯ. ಈ ಹಬ್ಬವು ಜ್ಯೋತಿಷ್ಯದಲ್ಲಿ ಮೇಷ ರಾಶಿಗೆ (ಮೇಷ) ಸೂರ್ಯನ ಚಲನೆಯನ್ನು ಗುರುತಿಸುತ್ತದೆ, ಇದನ್ನು ಹೊಸ ಆರಂಭದ ಸಮಯವೆಂದು ಪರಿಗಣಿಸಲಾಗುತ್ತದೆ.
ಶ್ರೀಕೃಷ್ಣನ ವಿಗ್ರಹವನ್ನು ಇಟ್ಟು ಅದರ ಮುಂದೆ ಕೊನ್ನಾ ಹೂವು (ಹಳದಿ ಬಣ್ಣದ ವಿಶೇಷ ಹೂವುಗಳು), ಹಣ್ಣು, ತರಕಾರಿ, ಒಂದು ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ,ಸಾಂಪ್ರದಾಯಿಕ ಲೋಹದ ಕನ್ನಡಿ, ಪವಿತ್ರ ಗ್ರಂಥ (ಭಗವದ್ಗೀತೆಯಂತೆ)ಗಳನ್ನಿಟ್ಟು ಪೂಜಿಸುವುದು.
ವಿಷು ಹಬ್ಬದ ಹಿಂದಿನ ಪೌರಾಣಿಕ ಕಥೆ:
ಹಿಂದೂ ಪುರಾಣದ ಪ್ರಕಾರ, ಶ್ರೀಕೃಷ್ಣನು ಈ ದಿನದಂದು ನರಕಾಸುರನೆಂಬ ರಾಕ್ಷಸನನ್ನು ಕೊಂದನು. ಈ ಕಥೆಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ತೋರಿಸುತ್ತದೆ ಮತ್ತು ಇದು ಹಬ್ಬದ ಸಂದೇಶದ ಪ್ರಮುಖ ಭಾಗವಾಗಿದೆ.
Comments are closed.