Delhi: ಉಗ್ರ ತಹವ್ವೂರ್​ ರಾಣಾನನ್ನು ಭಾರತಕ್ಕೆ ಕರೆತರಲು ಸರ್ಕಾರ ಖರ್ಚು ಮಾಡಿದ್ದೆಷ್ಟು ? ಗೊತ್ತಾದ್ರೆ ಶಾಕ್ ಆಗೋದು ಪಕ್ಕ

Delhi: ವಾಣಿಜ್ಯನಗರಿ ಮುಂಬೈ ಮೇಲೆ 2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾನನ್ನ (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಆತನನ್ನು ಬಂಧಿಸಿದೆ. ಸದ್ಯಕ್ಕೆ ಈತನಿಗೆ ನ್ಯಾಯಾಲಯವು 18 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿದೆ. ಇನ್ನು ತಹವ್ವೂರ್ ರಾಣಾನನ್ನು ಭಾರತಕ್ಕೆ ಮರಳಿ ಕರೆತರಲು ಸರ್ಕಾರ ಎಷ್ಟು ಹಣವನ್ನು ಖರ್ಚು ಮಾಡಿದೆ ಗೊತ್ತಾ? ಗೊತ್ತಾದ್ರೆ ನೀವೇ ಶಾಕ್ ಆಗುತ್ತೀರಿ.

ಸರ್ಕಾರ ಖರ್ಚು ಮಾಡಿದ್ದೆಷ್ಟು..?
ವರದಿಗಳ ಪ್ರಕಾರ, ಉಗ್ರ ರಾಣಾನನ್ನು ಭಾರತಕ್ಕೆ ಕರೆತೆರಲು ಗಲ್ಫ್​ ಜಿ-550 ಐಷರಾಮಿ ಚಾರ್ಟರ್​ ವಿಮಾನವನ್ನು ಬಳಸಲಾಗಿದೆ.ಇದರ ಬೆಲೆ ಗಂಟೆಗೆ 9 ಲಕ್ಷ ರೂ. ಈ ಚಾರ್ಟರ್​ ವಿಮಾನವನ್ನು ಇತನನ್ನು ಕರೆತರುವ ಸಲುವಾಗಿ ಬಾಡಿಗೆ ಪಡೆಯಲಾಗಿದೆ.

ಈ ವಿಮಾನದಲ್ಲಿ ಅಮೆರಿಕದ ಮಿಯಾಮಿಯಿಂದ ಭಾರತಕ್ಕೆ ಕರೆತರಲಾಯಿತು. ವಿಮಾನವು ಬುಧವಾರ (ಸ್ಥಳೀಯ ಸಮಯ) ಬೆಳಗಿನ ಜಾವ 2:15 ರ ಸುಮಾರಿಗೆ ಮಿಯಾಮಿಯಿಂದ ಹೊರಟು ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ತಲುಪಿತು. ಇಲ್ಲಿ ವಿಮಾನಕ್ಕೆ ಸುಮಾರು 11 ಗಂಟೆಗಳ ವಿರಾಮ ನೀಡಲಾಯಿತು ಮತ್ತು ಮರುದಿನ ಗುರುವಾರ, ಅದು ಟೇಕ್ ಆಫ್ ಆಗಿ ಸಂಜೆ 6:22 ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಈ ಸಂಪೂರ್ಣ ಸಮಯ ಪೂರ್ಣಗೊಳಿಸಲು ಬರೊಬ್ಬರಿ 40 ಗಂಟೆಗಳ ಸಮಯ ಹಿಡಿದಿದೆ. ಈ ಗಂಟೆಗಳ ಪ್ರಕಾರ ಉಗ್ರ ರಾಣಾನನ್ನು ಭಾರತಕ್ಕೆ ಕರೆತರಲು ವಿಮಾನವೆಚ್ಚ ಮಾತ್ರವೇ 4 ಕೋಟಿ ರೂ. ಅಧಿಕ ಖರ್ಚಾಗಿದೆ ಎಂದು ವರದಿ ಉಲ್ಲೇಖಿಸಿವೆ. ಅಲ್ಲದೆ, ಯಾರಾದರೂ ಮಿಯಾಮಿಯಿಂದ ದೆಹಲಿಗೆ ಸಾಮಾನ್ಯ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದರೆ, ಅದಕ್ಕೆ 4 ಲಕ್ಷ ರೂ. ವೆಚ್ಚವಾಗುತ್ತದೆ. ಈ ರೀತಿ ನೋಡಿದರೆ, ತಹವ್ವೂರ್ ಅನ್ನು ಮರಳಿ ತರಲು ಭಾರತ ಸರ್ಕಾರ 100 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ.

Comments are closed.