Madikeri: 10ಕೋಟಿ ರೂ.ಮೌಲ್ಯದ ಅಂಬರ್ಗ್ರೀಸ್ ಸಾಗಿಸುತ್ತಿದ್ದವರ ಬಂಧನ!

Madikeri: ಅಂಬರ್ಗ್ರೀಸ್ ಸಾಗಾಟ ನಡೆಸುತ್ತಿದ್ದ ಗ್ಯಾಂಗ್ವೊಂದು ಮಡಿಕೇರಿಯಲ್ಲಿ ಸಿಕ್ಕಿ ಬಿದ್ದಿದೆ. 10ಕೋಟಿ ರೂ. ಮೌಲ್ಯದ 10 ಕೆಜಿ 390 ಗ್ರಾಂ ಆಂಬರ್ಗ್ರಿಸ್ ಅಂದರೆ ತಿಮಿಂಗಲ ವಾಂತಿಯನ್ನು ಕೇರಳದ ತಿರುವನಂತಪುರದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದವರು ಮಡಿಕೇರಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಎರಡು ವಾಹನಗಳಲ್ಲಿ ತಿಮಿಂಗಿಲ ವಾಂತಿಯನ್ನು ಸಾಗಿಸುತ್ತಿದ್ದವರನ್ನು ವಿರಾಜಪೇಟೆ ಪೊಲೀಸರು ಬಂಧನ ಮಾಡಿದ್ದಾರೆ. ಸಂಶುದ್ದೀನ್, ನವಾನ್, ಬಾಲಚಂದ್ರ ಸೇರಿ ಒಟ್ಟು 10 ಆರೋಪಿಗಳನ್ನು ಬಂಧನ ಮಾಡಿದ್ದಾರೆ.
Comments are closed.