Puttur: ಪುತ್ತೂರು; ಎಸ್ಡಿಪಿಐಯ ಇಬ್ಬರು ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆ!


Puttur: ಸೋಮವಾರ (ಇಂದು) ಶಾಸಕ ಅಶೋಕ್ ರೈ ಅವರ ಮೂಲಕ ನೆಟ್ಟಣಿಗೆ ಮುಡ್ನೂರು ಗ್ರಾಮದ ಇಬ್ಬರು ಎಸ್ಡಿಪಿಐ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಎಸ್ಡಿಪಿಐ ಕೊಟ್ಯಾಡಿ ಉಪಾಧ್ಯಕ್ಷರಾದ ಇಮ್ತಿಯಾಜ್ ಮತ್ತು ಕಾರ್ಯಕರ್ತ ಹಬೀಬ್ ಕೊಟ್ಯಾಡಿ ಕಾಂಗ್ರೆಸ್ಗೆ ಸೇರ್ಪಡೆಯಾದವರು.
ಶಾಸಕ ಅಶೋಕ್ ರೈ, ಯುವ ಕಾಂಗ್ರೆಸ್ ಮುಖಂಡ ಶಮೀಮ್ ಗಾಳಿಮುಖ ನೇತೃತ್ವದಲ್ಲಿ ಹಾಗೂ ಇತರರ ಉಪಸ್ಥಿತಿಯಲ್ಲಿ ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Comments are closed.