Actor Darshan: ಕೇರಳದ ಪ್ರಸಿದ್ಧ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ದರ್ಶನ್!

Kerala: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಅವರು ಕೇರಳದ ಪ್ರಸಿದ್ಧ ಭಗವತಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ.
ಶತ್ರುಸಂಹಾರ ಪೂಜೆಯಲ್ಲಿ ದರ್ಶನ್ ಕುಟುಂಬ ಭಾಗಿಯಾಗಿದೆ ಎನ್ನಲಾಗಿದೆ. ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ನಟ ಧನ್ವೀತ್ ಸೇರಿದಂತೆ ಇನ್ನಿತರು ಪೂಜೆಯಲ್ಲಿ ಪಾಲ್ಗೊಂಡಿರುವ ಕುರಿತು ವರದಿಯಾಗಿದೆ. ಡೆವಿಲ್ ಸಿನಿಮಾದ ಎರಡನೇ ಶೆಡ್ಯೂಲ್ ನಿಗದಿಯಾಗಿರು ಸಮಯದಲ್ಲೇ ದಿಢೀರ್ ಆಗಿ ನಟ ದರ್ಶನ್ ಪೂಜೆಯಲ್ಲಿ ತೊಡಗಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
Comments are closed.