Aided School: ಅನುದಾನಿತ ಶಾಲೆಗಳು ಸರ್ಕಾರದ ಅನುಮತಿ ಇಲ್ಲದೆ ಶಿಕ್ಷಕರನ್ನು ಕೆಲಸದಿಂದ ತೆಗೆಯುವಂತಿಲ್ಲ – ಹೊಸ ಆದೇಶ!!

Share the Article

 

 Aided School: ಅನುದಾನಿತ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಸರ್ಕಾರದ ಅನುಮತಿ ಇಲ್ಲದೆ ಕೆಲಸದಿಂದ ತೆಗೆಯುವಂತಿಲ್ಲ ಎಂದು ಹೊಸ ಆದೇಶವನ್ನು ಕೋರ್ಟ್ ಹೊರಡಿಸಿದೆ.

 

ಹೌದು, ಮಹೇಶ್ವರಿ ಅಯ್ಯರ್ ಸೆಕೆಂಡರಿ ಶಾಲೆಯ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮಧ್ಯ ಪ್ರದೇಶ ಹೈಕೋರ್ಟ್ ಈ ರೀತಿಯ ಹೊಸ ಆದೇಶವನ್ನು ಹೊರಡಿಸಿದೆ. ಜೊತೆಗೆ ನ್ಯಾಯಮೂರ್ತಿ ವಿವೇಕ್ ರುಶಿಯಾ ಮತ್ತು ನ್ಯಾಯಮೂರ್ತಿ ಗಜೇಂದ್ರ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಶಾಲೆಯ ಮೇಲ್ಮನವಿಯನ್ನು ವಜಾಗೊಳಿಸಿದೆ. ಸರ್ಕಾರದಿಂದ ಅನುಮತಿ ಪಡೆಯದೆ ಶಾಲಾ ಆಡಳಿತ ಮಂಡಳಿಯು ಶಿಕ್ಷಕನನ್ನು ಕೆಲಸದಿಂದ ತೆಗೆದುಹಾಕುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

 

ಅಂದಹಾಗೆ ಜೀವಶಾಸ್ತ್ರ ವಿಭಾಗದ ಶಿಕ್ಷಕ ಎಸ್.ಕೆ. ವ್ಯಾಸ್ ಅವರು ನವೆಂಬರ್ 1974 ರಲ್ಲಿ, ಅವರನ್ನು ಶಾಲೆಯಲ್ಲಿ ಹಿರಿಯ ತರಗತಿ ಶಿಕ್ಷಕರಾಗಿ ನೇಮಿಸಲಾಯಿತು. 1991 ರಲ್ಲಿ, ಸರ್ಕಾರಿ ನಿಯಮಗಳ ಅಡಿಯಲ್ಲಿ ಅವರಿಗೆ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲಾಯಿತು.

ಈ ಬಡ್ತಿಯನ್ನು ವ್ಯಾಸ್ ಅವರಿಗೆ ಮಧ್ಯಪ್ರದೇಶ ಸರ್ಕಾರೇತರ ಶಿಕ್ಷಣ ಸಂಸ್ಥೆ ಕಾಯ್ದೆಯಡಿಯಲ್ಲಿ ನೀಡಲಾಗಿದೆ. ಆದರೆ 2005 ರಲ್ಲಿ, ಶಾಲೆಯಲ್ಲಿ 11 ಮತ್ತು 12 ನೇ ತರಗತಿಗಳಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಯಾವುದೇ ಪ್ರವೇಶವಿಲ್ಲ ಎಂದು ಹೇಳಿ, ಶಾಲೆಯು ವ್ಯಾಸ್ ಅವರನ್ನು ಕೆಲಸದಿಂದ ಹಠಾತ್ತನೆ ವಜಾಗೊಳಿಸಿತು. ಬಳಿಕ ಶಾಲಾ ಆಡಳಿತ ಮಂಡಳಿಯ ವಿರುದ್ಧ ವ್ಯಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. 2007 ರಲ್ಲಿ ಈ ಸಮಸ್ಯೆಯನ್ನು ಪರಿಹರಿಸಿ, ನ್ಯಾಯಾಲಯವು ವ್ಯಾಸ್ ಅವರನ್ನು ಮರುಸ್ಥಾಪಿಸಲು ಆದೇಶಿಸಿತು, ಆದರೆ ಶಾಲೆಯು ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಇದೀಗ ಈ ಅರ್ಜಿ ವಜಾಗೊಂಡಿದೆ.

Comments are closed.