Udupi: ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಸೀಜ್ ಮಾಡಿದ ತಹಶೀಲ್ದಾ‌ರ್ ಪ್ರತಿಭಾ.ಆರ್

Udupi: ಕಾಪು ಪೇಟೆಯಲ್ಲಿ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ 250 ಕೆ.ಜಿ. ಅಕ್ಕಿಯನ್ನು ಸೀಜ್ ಮಾಡಿದ ತಹಶೀಲ್ದಾ‌ರ್ ಡಾ.ಪ್ರತಿಭಾ ಆ‌ರ್ ಆರೋಪಿಗಳ ಮೇಲೆ ಎಫ್.ಐ.ಆ‌ರ್ ದಾಖಲಿಸಿದ್ದಾರೆ.

ಪ್ಯಾಸೆಂಜ‌ರ್ ಆಟೋದಲ್ಲಿ ಸಾಗಿಸುತ್ತಿದ್ದ 6 ಚೀಲಗಳಲ್ಲಿ ಇದ್ದ 250 ಕೆ.ಜಿ. ಅಕ್ಕಿಯನ್ನು ಮುಟ್ಟುಗೋಲು ಹಾಕಿ, ಕಾಪು ಪೋಲೀಸ್ ಸ್ಟೇಷನ್ ಗೆ ದೂರು ನೀಡಿ FIR ದಾಖಲಿಸಿರುತ್ತಾರೆ. ಅಕ್ಕಿಯ ಅಂದಾಜು ಬೆಲೆ 8500/- ಆಗಿರುತ್ತದೆ.

ಆರೋಪಿಗಳಾದ ಕಲಂದರ್ ಶಾಫಿ, ಉಬೈದುಲ್ಲ ರವರನ್ನು ವಿಚಾರಣೆಗೆ ಒಳಪಡಿಸಿದಾಗ “ಪಡಿತರದಾರರಿಂದ” 20 ರೂಪಾಯಿಯಂತೆ ಖರೀದಿಸಿದ್ದು ಹೆಚ್ಚಿನ ಬೆಲೆಗೆ ಮಾರಲು ತಗೊಂಡು ಗೋಗಿದ್ದೆವು ಎಂದು ಬಾಯಿ ಬಿಟ್ಟಿದ್ದಾರೆ.

Comments are closed.