Puttur: ಪುತ್ತೂರು; ದಾರಿ ಕೇಳುವ ನೆಪ, ಚಿನ್ನ ಉಂಗುರ ಎಗರಿಸಿ ಪರಾರಿ!

Puttur: ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರ ಎಳೆದು ಪರಾರಿಯಾಗಿರುವ ಘಟನೆ ಪುತ್ತೂರಿನ ರಾಗಿದಕುಮೇರ್ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ, ಅಪರಿಚಿತ ವ್ಯಕ್ತಿ ದಾರಿ ಕೇಳಿದ್ದಾನೆ. ಆಗ ದಾರಿ ಹೇಳಲು ಬಂದ ಮನೆಯವರ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್ನಲ್ಲಿ ಬಂದ ವ್ಯಕ್ತಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
Comments are closed.