CT Ravi: ಮುಸ್ಲಿಂ ಲೀಗ್‌ ಬಜೆಟ್‌; ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್‌ನ ಪ್ರವೇಶಿಸಿರಬೇಕು-ಸಿಟಿ ರವಿ

Share the Article

CT Ravi: ಸಿಎಂ ಸಿದ್ದರಾಮಯ್ಯ ಅವರು 16 ನೇ ದಾಖಲೆಯ ಬಜೆಟ್‌ ಮಂಡನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಲ್ಲುತ್ತದೆ. ನಾಲ್ಕು ಲಕ್ಷ ಕೋಟಿ ಬಜೆ ಮಂಡನೆ ಮಾಡಿದ್ದಾರೆ. ಸರಕಾರ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿದೆ, ನೀರು, ವಿದ್ಯುತ್‌, ಪ್ರಾಪರ್ಟಿ, ಬಿತ್ತನೆ, ಬಿಯರ್‌, ಹಾಲು, ಪೆಟ್ರೋಲ್‌ ಬೆಲೆ ಹೆಚ್ಚಳ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ಈ ಬಜೆಟ್‌ನಲ್ಲಿ ಕೆಲವರಿಗೆ ಖುಷಿಯಾಗಿದೆ. ಇದು ಕಾಂಗ್ರೆಸ್‌ ಬಜೆಟ್‌ ಅಥವಾ ಮುಸ್ಲಿಂ ಲೀಗ್‌ ಬಜೆಟ್‌. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ನೀಡಿರಬಹುದು. ಸರಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್‌ ಬ್ಯಾಂಕ್‌ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ.

ವೋಟ್‌ ತಗೊಳ್ಳುವಾಗ ಹಿಂದೂಗಳು ಬೇಕು ನಿಮಗೆ. ಅಧ್ಯಕ್ಷರಾಗಿ ನಾವು ಹಿಂದೂವಾಗಿ ಹುಟ್ಟಿದ್ದೇವೆ ಅಂತಾರೆ. ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದು, ಸಾಕಾಗಿಲ್ವ? ಬೇರೆ ಜಾತಿಯಲ್ಲಿ ಬಡವರು ಇಲ್ವಾ? ಅವರಿಗೆ ಯಾಕೆ ಶುಲ್ಕ ಕಡಿತಗೊಳಿಸಿಲ್ಲ? ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್‌ನ ಪ್ರವೇಶಿಸಿರಬೇಕು ಎಂದು ಸರಕಾರದ ಕಾಲೆಳೆದರು.

Comments are closed.