Udupi: ಸಿಟಿ ಬಸ್‌ ತಂಗುದಾಣದ ಬಳಿ ಜಗಳ; ನಾಲ್ವರು ವಶಕ್ಕೆ

Share the Article

Udupi: ಸಿಟಿ ಬಸ್‌ ತಂಗುದಾಣದ ಬಳಿ ನಾಲ್ವರು ಜಗಳವಾಡುತ್ತಿದ್ದು, ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ಗುರುವಾರ (ಪೆ.27) ನಡೆದಿದೆ.

ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳವಾಡುತ್ತಾ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಉಂಟು ಮಾಡಿತ್ತು. ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ನಗರ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಪುನೀತ್‌ ಕುಮಾರ್‌ ಅವರ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.

Comments are closed.