Tamilnadu: ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಸಾವಿಗೀಡಾದ ವ್ಯಕ್ತಿ

Chennai: ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

#JUSTIN புத்தக திருவிழாவில் நடனமாடியவர் மயங்கி விழுந்து உயிரிழப்பு
கலைநிகழ்ச்சியில் பங்கேற்று நடனமாடிய அகிலாண்டபுரத்தை சேர்ந்த ராஜேஸ் கண்ணன் உயிரிழப்பு#Sivaganga #Death #News18Tamilnadu | https://t.co/3v5L32pe7b pic.twitter.com/ycVcczYj3C
— News18 Tamil Nadu (@News18TamilNadu) February 22, 2025
ತಮಿಳುನಾಡಿನ ಶಾಲೆಯೊಂದರಲ್ಲಿ ಪುಸ್ತಕ ಮೇಳವನ್ನು ಆಯೋಜನೆ ಮಾಡಿದ್ದು, ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ವೇದಿಕೆಯಲ್ಲಿ ನಡೆಯುತ್ತಿತ್ತು. ಈ ವೇಳೆ ನೃತ್ಯ ತಂಡದ ಜೊತೆ ರಾಜೇಶಕಣ್ಣನ್ ನೃತ್ಯ ಮಾಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿ ಪರಿಶೀಲನೆ ಮಾಡಿದ ವೈದ್ಯರು ರಾಜೇಶಕಣ್ಣನ್ ಮೃತ ಹೊಂದಿರುವುದಾಗಿ ಘೋಷಿಸಿದ್ದಾರೆ.
Comments are closed.