Bangladesh: ಬಾಂಗ್ಲಾದೇಶದಲ್ಲಿ ಮತ್ತೊಂದು ಇಸ್ಕಾನ್ ಕೇಂದ್ರಕ್ಕೆ ಬೆಂಕಿ, ಹಿಂದೂ ವಿಗ್ರಹ ಹಾನಿ

Share the Article

Bangladesh: ನೆರೆಯ ಬಾಂಗ್ಲಾದೇಶದ ಢಾಕಾ ಜಿಲ್ಲೆಯ ಕೇಂದ್ರವನ್ನು ಸುಟ್ಟು ಹಾಕಲಾಗಿದೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಶನಿವಾರ ಆರೋಪಿಸಿದೆ. ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಾಮನ್ ದಾಸ್ ಅವರು, ಸಮುದಾಯದ ಸದಸ್ಯರು ಮತ್ತು ವೈಷ್ಣವ ವರ್ಗದ ಸದಸ್ಯರ ಮೇಲೆ ಉದ್ದೇಶಿತ ದಾಳಿಯು “ನಮ್ಹಟ್ಟಾ ಆಸ್ತಿಯಲ್ಲಿ ದೇವಸ್ಥಾನದೊಳಗೆ ವಿಧ್ವಂಸಕರು ವಿಗ್ರಹಗಳನ್ನು ಸುಟ್ಟುಹಾಕಿದರು” ಎಂದು ಪಿಟಿಐಗೆ ತಿಳಿಸಿದ್ದಾರೆ.

ಅವರು ಎಕ್ಸ್ ಹ್ಯಾಂಡಲ್‌ನ ಪೋಸ್ಟ್‌ನಲ್ಲಿ, “ಬಾಂಗ್ಲಾದೇಶದಲ್ಲಿ ಇಸ್ಕಾನ್ ನಮ್ಹಟ್ಟಾ ಕೇಂದ್ರವು ಸುಟ್ಟುಹೋಗಿದೆ. ಶ್ರೀ ಶ್ರೀ ಲಕ್ಷ್ಮೀ ನಾರಾಯಣನ ದೇವರುಗಳು ಮತ್ತು ದೇವಾಲಯದ ಒಳಗಿನ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.ಇಂದು ಮುಂಜಾನೆ 2-3 ಗಂಟೆಯ ನಡುವೆ ತುರಗ ಪೊಲೀಸ್ ಠಾಣಾ ವ್ಯಾಪ್ತಿಯ ಧೌರ್ ಗ್ರಾಮದಲ್ಲಿರುವ ಹರೇ ಕೃಷ್ಣ ನಾಮಹಟ್ಟಾ ಸಂಘದ ಅಧೀನದಲ್ಲಿರುವ ಶ್ರೀ ಶ್ರೀ ರಾಧಾ ಕೃಷ್ಣ ದೇವಸ್ಥಾನ ಮತ್ತು ಶ್ರೀ ಶ್ರೀ ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಬರೆದಿದ್ದಾರೆ.

ದಾಳಿಗಳು ನಡೆದಿರುವ ಕುರಿತು ಇಸ್ಕಾನ್, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಗಮನವನ್ನು ಸೆಳೆದಿದ್ದರೂ, ಅವರ ಕುಂದುಕೊರತೆಗಳನ್ನು ಶಮನಗೊಳಿಸಲು ಪೊಲೀಸರು ಮತ್ತು ಆಡಳಿತವು ಹೆಚ್ಚಿನದನ್ನು ಮಾಡುತ್ತಿಲ್ಲ ಎಂದು ದಾಸ್ ಆರೋಪ ಮಾಡದ್ದಾರೆ.

Leave A Reply