CM Chandrababu Naidu: ಇನ್ಮೇಲೆ 2 ಮಕ್ಕಳು ಇದ್ದವರಿಗಷ್ಟೇ ಎಲೆಕ್ಷನ್ ಟಿಕೆಟ್ ಸೇರಿದಂತೆ ಈ ಎಲ್ಲಾ ಸೌಲಭ್ಯ ಲಭ್ಯ: ಮುಖ್ಯಮಂತ್ರಿ ಆದೇಶ

CM Chandrababu Naidu: ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು, ಕುಟುಂಬಕ್ಕೆ ಎರಡೇ ಮಕ್ಕಳ ಕಾಯ್ದೆ ಜಾರಿಗೆ ಇರುವಾಗ, ಇತ್ತ ಕಡೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (CM Chandrababu Naidu) ಅವರು, ‘ಆಂಧ್ರಪ್ರದೇಶ ಸೇರಿದಂತೆ ಇಡೀ ದಕ್ಷಿಣ ಭಾರತದ ಜನಸಂಖ್ಯಾ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ’ ಎಂಬ ಆತಂಕದಲ್ಲಿ ‘ದಕ್ಷಿಣ ಭಾರತೀಯರೆಲ್ಲ ಹೆಚ್ಚು ಮಕ್ಕಳ ಹೆರಬೇಕು’ ಎಂದು ಕರೆ ನೀಡಿದ್ದಾರೆ.

ಇದಕ್ಕೆ ಪೂರಕ ಎಂಬಂತೆ 2ಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆ ಅವಕಾಶ ನೀಡುವ ಚಿಂತನೆ ನಡೆಸಲಾಗುತ್ತಿದೆ ಹಾಗೂ ಹೆಚ್ಚು ಮಕ್ಕಳ ಹೆರುವ ಕುಟುಂಬಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಇದೆ’ ಎಂದು ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತೀಯರಲ್ಲಿ ಸಂತಾನೋತ್ಪತ್ತಿ ಪ್ರಮಾಣ ಸರಾಸರಿ ಶೇ.1.6ಕ್ಕೆ ಕುಸಿದಿದೆ. ಅಂದರೆ ಪ್ರತಿ 100 ಕುಟುಂಬಗಳಲ್ಲಿ 160 ಮಕ್ಕಳು ಮಾತ್ರ ಜನಿಸುತ್ತಿದ್ದಾರೆ. ಇದು ರಾಷ್ಟ್ರೀಯ ಸರಾಸರಿ ಶೇ.2.1ಕ್ಕಿಂತ ಕಡಿಮೆ ಎಂದಿದ್ದಾರೆ. ಇದು ಇನ್ನಷ್ಟು ಕುಸಿದರೆ 2047ಕ್ಕೆ ದಕ್ಷಿಣದಲ್ಲಿ ಯುವಕರಿಗಿಂತ ವೃದ್ಧರೇ ಹೆಚ್ಚಾಗುತ್ತಾರೆ. ಜಪಾನ್‌, ಕೊರಿಯಾ, ಚೀನಾದಲ್ಲಿ ಕಾಣಿಸಿಕೊಂಡ ಈ ಸಮಸ್ಯೆ ದಕ್ಷಿಣ ಭಾರತದಲ್ಲೂ ಕಾಣಲಿದೆ. ಈಗಾಗಲೇ ಆಂಧ್ರದ ಹಲವು ಹಳ್ಳಿ ಸೇರಿದಂತೆ ದೇಶದ ಗ್ರಾಮೀಣ ಭಾಗಗಳಲ್ಲಿ ವಯೋವೃದ್ಧರು ಮಾತ್ರ ಉಳಿದುಕೊಂಡಿದ್ದಾರೆ. ಯುವಕರು ನಗರ ಪ್ರದೇಶಗಳಿಗೆ ಮತ್ತು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಅಸಮತೋಲನ ಸರಿಪಡಿಸಲು ದಕ್ಷಿಣ ಭಾರತೀಯರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು’ ಎಂದು ಸಲಹೆ ನೀಡಿದರು.

ಮೊದಲನೆಯದಾಗಿ ಹೆಚ್ಚು ಮಕ್ಕಳ ಹೆರುವ ಪೋಷಕರಿಗೆ ವಿವಿಧ ರೀತಿಯ ವಿಶೇಷ ಸೌಲಭ್ಯ ಒದಗಿಸಲು ನಾವು ಚಿಂತಿಸುತ್ತಿದ್ದೇವೆ’ ಎಂದರು. ‘ಎರಡನೆಯದಾಗಿ, 2ಕ್ಕಿಂತ ಹೆಚ್ಚು ಮಕ್ಕಳು ಹೊಂದಿದವರಿಗೆ ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧೆ ಅವಕಾಶ ನೀಡುವ ಕಾನೂನು ಜಾರಿಗೆ ಯೋಚನೆ ಮಾಡುತ್ತಿದ್ದೇವೆ ಎಂದಿದ್ದಾರೆ.

Leave A Reply

Your email address will not be published.