Bangalore: ಕಂಡಕ್ಟರ್‌ಗೆ ಚಾಕು ಇರಿತ ಪ್ರಕರಣ ಮಾಸುವ ಮುನ್ನವೇ, ಸ್ಕ್ರೂ ಡ್ರೈವರ್‌ ತೋರಿಸಿ ಚಾಲಕ, ನಿರ್ವಾಹಕನಿಗೆ ಪ್ರಯಾಣಿಕನಿಂದ ಅವಾಜ್‌

Bangalore: ಬಿಎಂಟಿಸಿ ಬಸ್‌ ಕಂಡಕ್ಟರ್‌ಗೆ ವ್ಯಕ್ತಿಯೋರ್ವ ಚಾಕು ಇರಿದ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಯಾಣಿಕನೋರ್ವ ಸ್ಕ್ರೂಡ್ರೈವರ್‌ ತೋರಿಸಿ ಬಸ್‌ ಚಾಲಕ ಹಾಗೂ ನಿರ್ವಾಹಕರಿಗೆ ಬೆದರಿಯೊಡ್ಡಿದ ಘಟನೆಯೊಂದು ಅತ್ತಿಬೆಲೆಯಿಂದ ಮೆಜಿಸ್ಟಿಕ್‌ಗೆ ಹೋಗುತ್ತಿದ್ದ ಬಸ್‌ನಲ್ಲಿ ನಡೆದಿದೆ.

ಕೊನಪ್ಪನ ಅಗ್ರಹಾರದಲ್ಲಿ ಈ ವ್ಯಕ್ತಿ ಬಸ್‌ ಹತ್ತಿದ್ದು, ಈ ಸಮಯದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ಕೊಡಲು ಕಂಡಕ್ಟರ್‌ ಅದೇ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಹೊಸರೋಡ್‌ ಬಸ್‌ ನಿಲ್ದಾಣದ ಬಳಿ ಬಸ್‌ನಿಂದ ಇಳಿದು ಬ್ಯಾಗ್‌ನಲ್ಲಿದ್ದ ಸ್ಕ್ರೂಡ್ರೈವರ್‌ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ಚುಚ್ಚಿ ಬಿಡುತ್ತೇನೆ ಎಂದು ಹೇಳಿದ್ದಾರೆ.

Leave A Reply

Your email address will not be published.