Putturu: ಕ್ಷುಲ್ಲಕ ಕಾರಣಕ್ಕೆ ಪುತ್ತೂರಿನ ಪದವೀಧರ ಯುವಕ ನೇಣಿಗೆ ಶರಣು !!

Share the Article

Putturu: ಬದುಕಿ ಬಾಳಬೇಕಾದ ಯುವಕನೋರ್ವ ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ(Suicide) ಘಟನೆ ಪುತ್ತೂರು(Puttur) ತಾಲೂಕಿನ ಮಾಡಾವಿನ ಕೆಯ್ಯೂರಿನಲ್ಲಿ ನಡೆದಿದೆ. ಈತ ಬಿಸಿಎ(BCA) ಪದವೀಧರನಾಗಿದ್ದು, 27 ವರ್ಷದ ಕೆಯ್ಯೂರಿನ ಉದ್ದೋಳೆ ನಿವಾಸಿ ಸಚಿನ್ ಎಂದು ತಿಳಿದು ಬಂದಿದೆ.

ಸಚಿನ್ ತಮ್ಮ ಪದವಿ ಮುಗಿಸಿ ಕೆಲಸ(Job) ಹುಡುಕುತ್ತಿದ್ದರು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಏನೋ ಅನ್ನೋದು ಇನ್ನು ತಿಳಿದು ಬಂದಿಲ್ಲ. ಇವರು ತಂದೆ, ತಾಯಿ, ಸಹೋದರ, ಅಕ್ಕ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

1 Comment
  1. Chadwick Rohman says

    Would you be all in favour of exchanging hyperlinks?

Leave A Reply

Your email address will not be published.