Sakaleshpura: ಸಕಲೇಶಪುರ ರೈಲ್ವೇ ಹಳಿಯಲ್ಲಿ ಮತ್ತೆ ಭೂಕುಸಿತ: ರೈಲು ಸಂಚಾರ ಸ್ಥಗಿತ

Share the Article

Sakaleshpura: ಮಳೆಗಾಲ ಮುಗಿಯುವವರೆಗೆ ಬೆಂಗಳೂರು-ಮಂಗಳೂರು(Bengaluru-Mangaluru) ರೈಲು ಸಂಚಾರದಲ್ಲಿ ವ್ಯತ್ಯಯ ಆಗುವ ಲಕ್ಷಣಗಳು ಗೋಚರಿಸುತ್ತಿದೆ. ಕಳೆದ 15 ದಿನಗಳಿಂತ ಸುಬ್ರಹ್ಮಣ್ಯ-ಸಕಲೇಶಪುರ(Subramanya- Sakaleshapura) ರಸ್ತೆಯಲ್ಲಿ ನಿರಂತರ ಭೂ ಕುಸಿತ ಸಂಭವಿಸುತ್ತಲೇ ಇದೆ.

ಇದೀಗ ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ಮತ್ತೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಹಾಗಾಗಿ ಈ ಮಾರ್ಗವಾಗಿ ಸಾಗುವ ಎಲ್ಲಾ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ ಕೆಲವು ದಿಗಳ ಹಿಂದಷ್ಟೇ ಈ ಮಾರ್ಗದಲ್ಲಿ ಮಣ್ಣು ಕುಸಿತ ಉಂಟಾಗಿ ಮಣ್ಣು ತೆರವು ಮಾಡಲಾಗಿತ್ತು. ಅದಾಗಿ ಎರಡು ದಿನ ರೈಲು ಸಂಚಾರ ಮಾಡಿದೆ. ಇದೀಗ ಮತ್ತೆ ಅದೇ ಸ್ಥಳದಲ್ಲಿ ಭೂ ಕುಸಿತ ಆಗಿ ಸಂಚಾರ ಸ್ಥಗಿತಗೊಂಡಿದೆ.

ಕಳೆದ 15 ದಿನಗಳಿಂದ ರ ರೈಲು ಸ್ಥಗಿತವಾಗಿ ಪ್ರಯಾಣಿಕರಿಗೆ ಬಹಳ ತೊಂದರೆ ಉಂಟಾಗಿತ್ತು. ಇದೀಗ ಇಂದು ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ ಬಳಿ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಮಣ್ಣು ಬಿದ್ದ ಪರಿಣಾಮ ಅರ್ಧ ಮಾರ್ಗದಲ್ಲೇ ನಿಂತಿದ್ದು ಪ್ರಯಾಣಿಕರ ಪಾಡು ಹೇಳ ತೀರದಾಗಿದೆ. ರೈಲ್ವೇ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ತಕ್ಷಣ ಕಾರ್ಯ ಪವೃತ್ತರಾಗಿದ್ದಾರೆ. ಸುಮಾರು ದಿನಗಳಿಂದ ನಿರಂತರ ಸಮಸ್ಯೆ ಈ ರೈಲು ಮಾರ್ಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಯೆಡಕುಮೇರಿ ಹಾಗೂ ಕಡಗರವಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು.

ಹಗಲು ರಾತ್ರಿ ನಿರಂತರ 400ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡಿ ಮಣ್ಣು ತೆರವು ಕಾರ್ಯ ಮಾಡಿದ್ದರು. ಮತ್ತೆ ರೈಲು ಸಂಚಾರ ಆ.8ರಿಂದ ಆರಂಭಗೊಂಡಿತ್ತು. ಇದಾಗಿ 2 ದಿನಕ್ಕೆ ಮತ್ತೆ ಬಾಳುಪೇಟೆ ಸಮೀಪ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಸಮಸ್ಯೆ ಉಂಟಾಗಿ ರೈಲು ಸಂಚಾರದಲ್ಲಿ ಸಮಸ್ಯೆ ಉಂಟಾಗಿದೆ.

1 Comment
  1. Carlos Delbridge says

    Howdy! Quick question that’s totally off topic. Do you know how to make your site mobile friendly? My weblog looks weird when viewing from my iphone 4. I’m trying to find a theme or plugin that might be able to correct this issue. If you have any recommendations, please share. Appreciate it!

Leave A Reply

Your email address will not be published.