Life: ಯಶಸ್ಸಿನ ರಹಸ್ಯ ಪೆಟ್ಟಿಗೆಯನ್ನು ತೆರೆಯಿರಿ ಜೀವನದ ಗೆಲುವಿನ ಕೋಡ್ ಏನು ಎಂದು ಇಂದೇ ತಿಳಿಯಿರಿ

Life: ಮಾನವರು ವಿಕಾಸದ ಉತ್ತುಂಗದಲ್ಲಿದ್ದಾರೆ. ವಿಕಸನವು ಈ ಸ್ಥಿತಿಗೆ ಬರಲು ಲಕ್ಷಾಂತರ ವರ್ಷಗಳನ್ನು ತೆಗೆದುಕೊಂಡಿದ್ದರೂ, ಕೆಲವರನ್ನು ಹೊರತುಪಡಿಸಿ ಹೆಚ್ಚಿನ ಜನರು ಪೂರ್ಣ ಸಾಮರ್ಥ್ಯದಿಂದ ತಮ್ಮ ವಿಕಸನವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಗಮನ ಹರಿಸಿಲ್ಲ. ಈ ಲೇಖನವು ಅದರ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಮತ್ತು ನಿಮ್ಮ ಪರಿಣಾಮಕಾರಿತ್ವವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. “ಶರೀರಮಾದ್ಯಂ ಖಲು ಧರ್ಮ ಸಾಧನಂ” ಎಂಬಂತೆ ದೇಹದ ಅರಿವು, ಪರಿಣಾಮಕಾರಿತ್ವವನ್ನು ಸುಧಾರಿಸುವ ಸಾಧನಗಳಲ್ಲಿ ಒಂದಾಗಿದೆ. ನೀವು ಕುಳಿತುಕೊಳ್ಳುವ, ನಿಲ್ಲುವ, ನಡೆಯುವ, ಮಾತನಾಡುವ ಮತ್ತು ನಿಮ್ಮನ್ನು ನೀವು ವ್ಯಕ್ತಪಡಿಸುವ ರೀತಿಗಳ ಗಮನವಿಡುವುದರಿಂದ ತಿಳಿದುಬರುತ್ತದೆ. ಜೀವನ ಶೈಲಿ, ಆಹಾರ ಪದ್ಧತಿ, ಚಿಂತನೆಯ ಮಾದರಿ ಮುಂತಾದವುಗಳಲ್ಲಿ ಏರುಪೇರಾದರೆ ದೈಹಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ.

ಇದು ವಾಸ್ತವವಾಗಿ ಮಂಜುಗಡ್ಡೆಯ ತುದಿಯನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನಸಿಕ ಸ್ವಾಸ್ಥ್ಯ, ಕೌಟುಂಬಿಕ ಮೌಲ್ಯಗಳು, ಮಾನವೀಯತೆ ಮತ್ತು ಆಧ್ಯಾತ್ಮಿಕ ಅರಿವಿನಂತಹ ವಿಷಯಗಳಲ್ಲಿ ಸಂಪೂರ್ಣ ಕ್ಷೀಣತೆಗಳನ್ನು ಸಮುದ್ರದಲ್ಲಿ ಮರೆಮಾಚಿರುವ ವಿಶಾಲವಾದ ಮಂಜುಗಡ್ಡೆಯೆಂತೆ ಮರೆಮಾಡಲಾಗಿದೆ. ಈ ಕರಾಳ ಕಾಲದಲ್ಲಿ, ಒಂದು ಸಣ್ಣ ಶೇಕಡಾವಾರು ಜನರು ಅಸಾಮಾನ್ಯ ಆಧ್ಯಾತ್ಮಿಕ ಮತ್ತು ದೈಹಿಕ ಶಕ್ತಿಯೊಂದಿಗೆ ಸರಾಗವಾಗಿ ತಮ್ಮ ಗುರಿಯನ್ನು ಸಾಧಿಸುತ್ತಾರೆ. ಇಂತವರ ರಹಸ್ಯವೇನು? ಅವರು ಸರ್ವಶಕ್ತರಾದ ಗುರುವಿನ ಮಾರ್ಗದರ್ಶನದಲ್ಲಿರುತ್ತಾರೆ ಎಂಬುದನ್ನು ನಾನು ಅರಿತೆ.

ನಮ್ಮಲ್ಲಿರುವಂತಹ ಕರ್ಮಗಳನ್ನು ಕಳೆದು, ಶರಣಾಗತರಾಗಿ ಬಂದವರಿಗೆ ತಮ್ಮ ಜ್ಞಾನದ ಭಂಡಾರದಿಂದ ಒಂದು ನಿರ್ದಿಷ್ಟವಾದ ಆಕಾರವನ್ನು ನೀಡುವಂತಹ ಸರ್ವಶಕ್ತರಲ್ಲಿ ಶ್ರೀಗುರುಗಳು ಒಬ್ಬರು. ಸದ್ಯದಲ್ಲೇ ನಡೆದ ಒಂದು ಪ್ರವಚನದಲ್ಲಿ ಶ್ರೀಗುರುಗಳು ಜೀವನದ ಬಗ್ಗೆ ಹೇಳಿದ ಸಂಗತಿಯೊಂದು ನಮ್ಮೆಲ್ಲರನ್ನು ಸೆಳೆದು ಮೈಮರೆಯುವಂತೆ ಮಾಡಿತ್ತು. ಬನ್ನಿ ಶ್ರೀಗುರುಗಳ ಪದಗಳನ್ನು ಅನುಸರಿಸೋಣ, ಜೀವನದ ವಾಸ್ತವವನ್ನು ಅರಿಯೋಣ.

“ನಿಮ್ಮ ದೈಹಿಕ ಭಂಗಿ ಸರಿಯಾಗಿಲ್ಲದಿದ್ದರೆ, ನಿಮ್ಮ ದೈಹಿಕ ಸ್ಥಿತಿಯಲ್ಲಿ ಶಕ್ತಿಯು ಸಮತೋಲನದಲ್ಲಿರುವುದಿಲ್ಲ. ಈ ಅಸಮತೋಲನದ ಪರಿಣಾಮವಾಗಿ, ನಿಮ್ಮ ಮನಸ್ಸು ಕೂಡ ಕನಸು ಕಾಣಲು ಆರಂಭಿಸುತ್ತದೆ ಮತ್ತು ನಿಮ್ಮ ಸುತ್ತಲಿನ ಭೌತಿಕ ಪ್ರಪಂಚದಲ್ಲಿ ನೀವು ಹೆಚ್ಚು ಆಸಕ್ತಿ ಹೊಂದಲು ಪ್ರಾರಂಭಿಸುತ್ತೀರಿ. ಯೋಗ ಆಸನಗಳು ನಿಮ್ಮ ಭಂಗಿಯನ್ನು ಸರಿಪಡಿಸುವಲ್ಲಿ ಮತ್ತು ನಿಮ್ಮ ಶಕ್ತಿಯನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಈ ಪ್ರಕ್ರಿಯೆಯ ಅರಿವಿಲ್ಲದೆ ಜನರು, ದಿನದ ಸರಿಸುಮಾರು 45-55% ಅನ್ನು ಕನಸಿನಲ್ಲಿ ಕಳೆಯುತ್ತಾರೆ. ಸರಾಸರಿ ವ್ಯಕ್ತಿಯು ದಿನಕ್ಕೆ ಸುಮಾರು 60,000 ಆಲೋಚನೆಗಳನ್ನು ಹೊಂದಿರುತ್ತಾನೆ (0.822 ಸೆಕೆಂಡಿಗೆ ಒಂದು ಆಲೋಚನೆ ಅಥವಾ 4 ಸೆಕೆಂಡ್‌ಗಳಿಗೆ ಐದು ಆಲೋಚನೆಗಳು) ಮತ್ತು 80-90% ಆಲೋಚನೆಗಳು ಪುನರಾವರ್ತಿತ ಸ್ವಭಾವವನ್ನು ಹೊಂದಿವೆ. ಹೆಚ್ಚಿನ ಜನರಿಗೆ, ಅದೇ ಆಲೋಚನೆಯು ಹಲವಾರು ವರ್ಷಗಳಿಂದ ಪುನರಾವರ್ತನೆಯಾಗುತ್ತದೆ. ಅಂತಹ ಪ್ರಕರಣಗಳನ್ನು ಮೆದುಳಿನ ನೆಟ್‌ವರ್ಕಿಂಗ್‌ನ ಡಿಫಾಲ್ಟ್ ಮೋಡ್ ಎಂದು ಕರೆಯಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ, ವ್ಯಕ್ತಿಯು ಪ್ರಜ್ಞಾಪೂರ್ವಕ ಮನಸ್ಸಿನ ಸ್ಥಿತಿಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ ಮತ್ತು ಎಂದಿಗೂ ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.

ಅಂತಹ ಜನರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಒಂದು ಉದಾಹರಣೆಯನ್ನು ಹೇಳುವುದಾದರೆ, ನೀವು ಬಸ್ ನಿಲ್ದಾಣದಲ್ಲಿ ಕುಳಿತು ಬಸ್‌ಗಾಗಿ ಕಾಯುತ್ತಿದ್ದರೆ, ದೂರದಿಂದ ಬರುವ ಎಲ್ಲಾ ಬಸ್‌ಗಳನ್ನು ನೀವು ಗಮನಿಸುತ್ತಿರುತ್ತೀರಿ. ಆದರೆ ನೀವು ಸ್ನೇಹಿತರಿಗಾಗಿ ಕಾಯುತ್ತಿದ್ದರೆ, ನೀವು ಯಾವುದೇ ಬಸ್ಸನ್ನು ಗಮನಿಸುವುದಿಲ್ಲ, ಬದಲಾಗಿ ನೀವು ಜನರ ಚಲನವಲನಗಳನ್ನು ಹುಡುಕುತ್ತಿದ್ದೀರಿ. ಸ್ನೇಹಿತರಿಗಾಗಿ ಕಾಯುತ್ತಿರುವಾಗ, ನೀವು ಹಾದುಹೋದ ಬಸ್ಸಿನೊಳಗೆ ನಿಮ್ಮ ಕುಟುಂಬದ ಸದಸ್ಯರೊಬ್ಬರನ್ನು ನೋಡಿದೆ ಎಂದು ಊಹಿಸಿ. ಆ ವ್ಯಕ್ತಿಗೆ ಸಂಪರ್ಕವಿರುವ ಅನೇಕ ಕಥೆಗಳನ್ನು ನೀವು ಊಹಿಸಲು ಪ್ರಾರಂಭಿಸುತ್ತೀರಿ, ಅವನು ಏನುಮಾಡುತ್ತಿದ್ದಾನೆ, ಎಲ್ಲಿಗೆ ಹೋಗುತ್ತಿದ್ದಾನೆ ಎಂದು. ಸಾಮಾನ್ಯ ಜೀವಿಗಳಿಗೆ, ಇದು ಆಲೋಚನೆಗಳ ಮಾರ್ಗವಾಗಿದೆ.

ಆದರೆ ಒಬ್ಬ ಯೋಗಿಯು ಆ ಸ್ಥಾನದಲ್ಲಿ ಕುಳಿತಿದ್ದರೆ, ಅವನಿಗೆ ಯಾವುದೇ ಆಲೋಚನೆಯೂ ಇರುವುದಿಲ್ಲ ಅಥವಾ ಯಾವುದರ ಸಂಪರ್ಕವೂ ಇರುವುದಿಲ್ಲ. ಆತನಿಗೆ ಖಾಲಿ ರಸ್ತೆಯ ಶಾಂತತೆಯನ್ನು ಗಮನಿಸಲು ಸಾಧ್ಯವಾಗುತ್ತದೆ. ಅವನ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಅವನು ವಿವೇಚಿಸುವುದಿಲ್ಲ. ದೀರ್ಘಕಾಲದವರೆಗೆ ಜಾಗೃತ ಉಸಿರಾಟವನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ.

ನಿರ್ದಿಷ್ಟ ಬಸ್ ಅನ್ನು ಹಿಡಿಯುವ ಮೂಲಕ, ನೀವು ಗಮ್ಯಸ್ಥಾನವನ್ನು ತಲುಪುವ ಹಾದಿಯಲ್ಲಿದ್ದೀರಿ ಎಂಬ ಭ್ರಮೆಯನ್ನು ನೀವು ಹೊಂದಿರುತ್ತೀರಿ. ಆದರೆ ನೀವು ಬಯಸುವ ಯಾವುದೇ ರಸ್ತೆಯಲ್ಲಿ ಪ್ರಯಾಣಿಸುವ ಸ್ವಾತಂತ್ರ್ಯವನ್ನು ನೀವು ಕಳೆದುಕೊಂಡಿದ್ದೀರಿ ಎಂಬ ಸತ್ಯವನ್ನು ನೀವು ಮರೆತುಬಿಡುತ್ತೀರಿ. ಅದೇ ರೀತಿಯಲ್ಲಿ. ಪ್ರಾಣವು ನಿಮ್ಮ ದೇಹವನ್ನು ಪ್ರವೇಶಿಸಿದಾಗ, ನೀವು ನಿಮ್ಮ ಗಮ್ಯಸ್ಥಾನ (ಮೋಕ್ಷ) ದತ್ತ ಸಾಗುತ್ತಿದ್ದೀರಿ ಎಂದು ನಿಮಗೆ ಅನಿಸುತ್ತದೆ. ಆದರೆ ನೀವು ಆಲೋಚನೆಗಳ ಹರಿವಿನಲ್ಲಿ ಕಳೆದುಹೋಗುತ್ತೀರಿ ಮತ್ತು ಈ ಉಸಿರಾಟದ ಪ್ರಕ್ರಿಯೆಯು ನಿಮ್ಮ ಅಸ್ತಿತ್ವದ ಆಧಾರವಾಗಿದೆ ಎಂದು ತಿಳಿಯುವುದನ್ನು ಮರೆತುಬಿಡುತ್ತೀರಿ.

ಯೋಗಿಗಳು ಪ್ರತಿ ಕ್ಷಣವೂ ಉಸಿರಾಡುವ ಈ ಸುಂದರವಾದ ಪ್ರಕ್ರಿಯೆಯ ಬಗ್ಗೆ ತಿಳಿದಿರುತ್ತಾರೆ, ಜೀವನದ ಮಹತ್ವವನ್ನು ತಿಳಿದಿದ್ದಾರೆ. ಅವರು ತಮ್ಮ ಜೀವನದ ಉದ್ದೇಶವನ್ನು ಪೂರೈಸುತ್ತಾರೆ, ಕರ್ಮವನ್ನು ಜಯಿಸುತ್ತಾರೆ. ಆದ್ದರಿಂದ ದೇಹದೊಳಗಿನ ಪ್ರಾಣವು ಮತ್ತೆ ಮೂಲ ಬ್ರಹ್ಮ ತತ್ವಕ್ಕೆ ವಿಲೀನಗೊಳ್ಳುತ್ತದೆ. (ಇದು ನಿಖರವಾಗಿ ಸಮಾಧಿ ಅಥವಾ ಮುಕ್ತಿ ಎಂದರ್ಥ.) ಉಸಿರಾಟವು ನಮ್ಮನ್ನು ಜೀವಂತವಾಗಿರಿಸುವ ಏಕೈಕ ಪ್ರಕ್ರಿಯೆಯಾಗಿದೆ. (ಪ್ರಾಣದ ಸ್ವಭಾವವೇ,) ಪ್ರಾಣವು ದೇಹವನ್ನು ಪ್ರವೇಶಿಸಿದಾಗ, -ಪೂರಕ (ಇನ್ಹಲೇಷನ್)-. ‘ನಾನು ಕಳೆದು ಹೋಗಿದ್ದೆ, ಮಗುವನ್ನು ಕಳೆದುಕೊಂಡ ತಾಯಿಯಂತೆ ಹುಡುಕುತ್ತಿದ್ದೆ, ಅಂತಿಮವಾಗಿ ಮಗುವನ್ನು ಮರಳಿ ಪಡೆದೆ’ – ಎಂದೂ, ‘ನಾನು ನಿನ್ನಿಂದ ಬಂದಿದ್ದೇನೆ, ನಿನ್ನ ಭಾಗವಾಗಿದ್ದೇನೆ ಮತ್ತೆ ನಿನ್ನ ಬಳಿಗೆ ಹಿಂತಿರುಗಿ ಬರುತ್ತೇನೆ’. – ಎಂದು (ಪ್ರಾಣವು) ದೇಹದ ಹೊರಬರುವಾಗ ಹೇಳುತ್ತದೆ.

ನಿಮ್ಮ ಉಸಿರಾಟದ ಮೇಲೆ ನೀವು ಕೇಂದ್ರೀಕರಿಸಿದಾಗ ನಿಮ್ಮ ಮನಸ್ಸು ಏಕಾಗ್ರತೆಯನ್ನು ಹೊಂದಲು ತರಬೇತಿ ಪಡೆಯುತ್ತದೆ. ಇದು ಒಂದು ಆವರ್ತಕ ಪ್ರಕ್ರಿಯೆಯಾಗಿದ್ದು, ನಿರಂತರ ಅಭ್ಯಾಸದೊಂದಿಗೆ ನೀವು ಉಸಿರಾಟದ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ. ಉಸಿರಾಟದ ಪ್ರಕ್ರಿಯೆಯ ಸೌಂದರ್ಯವನ್ನು ನೀವು ನಿಧಾನವಾಗಿ ಅರಿತುಕೊಳ್ಳುತ್ತೀರಿ. ಇದನ್ನೇ ಯೋಗಿಗಳು ಸಂತಸವೆಂದು ಸಂಬೋಧಿಸುತ್ತಾರೆ. ಯೋಗಿಗಳು, ಪ್ರಾಣವು ಪ್ರಕೃತಿ ಮತ್ತು ದೇಹದ ನಡುವಿನ ಸೇತುವೆಯಾಗಿದೆ, ಎಂಬುದನ್ನು ಅರಿತುಕೊಂಡವರು.

ಇದು ಯಾವಾಗಲೂ ಸಮುದ್ರದ ಅಲೆಗಳು ಮತ್ತು ತೀರದಂತೆ ಸಂಪರ್ಕ ಹೊಂದಿದೆ. ಯೋಗಿಗಳು ಜೀವನ ಯಾವುದು ಮತ್ತು ಜೀವನ ಯಾವುದು ಅಲ್ಲವೆಂಬುದನ್ನು ತಿಳಿದವರು. ಜನನ ಮತ್ತು ಮರಣದ ನಡುವಿನ ಎಲ್ಲಾ ಘಟನೆಗಳ ಬಗ್ಗೆ ಅವನು ತಿಳಿದಿರುತ್ತಾನೆ. ಇದುವೇ ಸಾಕ್ಷಾತ್ಕಾರ. ಇದುವೇ ಸ್ವಯಂ ಅರಿವು. ದೇಹ ಮತ್ತು ಉಸಿರಾಟದ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಮೂಲಕ, ನೀವು ಪ್ರಸ್ತುತ ಕ್ಷಣದ ಬಗ್ಗೆ ಹೆಚ್ಚು ಜಾಗೃತರಾಗಬಹುದು. ಇದು ಶಾಂತ ಮತ್ತು ಕೇಂದ್ರೀಕೃತ ಮನಸ್ಸಿಗೆ ಕಾರಣವಾಗುತ್ತದೆ. ಇದು ಪ್ರತಿಯಾಗಿ, ಪರಿಣಾಮಕಾರಿತ್ವವನ್ನು ಸುಧಾರಿಸುತ್ತದೆ, ಇದು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.”

ಯೋಗಿಗಳು ವಾಸ್ತವದಲ್ಲಿ ಇದ್ದು ಲೋಕವನ್ನೇ ಗೆಲ್ಲುತ್ತಾರೆ ಆದರೆ ಮನುಷ್ಯರು ಪ್ರಪಂಚವೆಂಬ ಮಾಯಾಲೋಕದಲ್ಲಿ ಮುಳುಗಿ ತನ್ನನ್ನು ತಾನು ಕಳೆದುಕೊಳ್ಳುತ್ತಾನೆ. ಶ್ರೀಗುರುಗಳ ಈ ಪ್ರವಚನವೂ ಓದುಗರ ಮನಸ್ಸನ್ನು ಮಾಯಾಲೋಕದಿಂದ ವಾಸ್ತವ ದತ್ತ ನಡೆಯಲುಪ್ರೇರಣೆ ನೀಡುತ್ತದೆ. ಇಂದಿನ ವಾಸ್ತವತೆಯೇ ನಮ್ಮ ಈ “ಧ್ರುವತಾರೆ.”

Leave A Reply

Your email address will not be published.