Shirur: ಶಿರೂರುನಲ್ಲಿ ಗುಡ್ಡ ಕುಸಿತ, ಇದರ ಬೆನ್ನಲ್ಲೇ ಕಾಣೆಯಾಗಿದ್ದ ತಮಿಳುನಾಡಿನ ಲಾರಿ ಚಾಲಕನ ಅರ್ಧ ಮೃತ ದೇಹ ಪತ್ತೆ!

Shirur: ಶಿರೂರು (Shirur)ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ತಮಿಳುನಾಡು ಮೂಲದ ವ್ಯಕ್ತಿ ಲಾರಿ ಚಾಲಕ ಶರವಣನ್ ಎಂಬಾತ ನಾಪತ್ತೆಯಾಗಿದ್ದನು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಲಾರಿ ಚಾಲಕ ಶರಣವನ್ ಮೃತದೇಹ ಪತ್ತೆಯಾಗಿದ್ದು ಡಿಎನ್​ಎ ವರದಿಯ ಬಳಿಕ ಶರವಣನ್ ಮೃತದೇಹ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆ ವೇಳೆ ಕಳೆದ ನಾಲ್ಕು ದಿನಗಳ ಹಿಂದೆ ಗಂಗೆಕೊಳದಲ್ಲಿ ಹೊಟ್ಟೆಯ ಕೆಳಭಾಗದ ದೇಹ ಮಾತ್ರ ಪತ್ತೆಯಾಗಿತ್ತು.ಅಬ್ಬಾಬ್ಬಾ ಎಂತಹ ಬುಕುಸಿತ.ಈ ಮೃತ ದೇಹ ಈಗ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತ ದೇಹ ಎಂದು ಉತ್ತರ ಕನ್ನಡ ಎಸ್​ಪಿ ನಾರಾಯಣ್ ದೃಢ ಪಡಿಸಿದ್ದಾರೆ.

ರಾಷ್ಟೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾದ ಪಕ್ಕದಲ್ಲಿಯೇ ಟ್ಯಾಂಕರ್ ಇತ್ತು.ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದರೆಂದು ಈಗ ತಿಳಿದುಬಂದಿದೆ.ಈ ಬಗ್ಗೆ ಮಾಹಿತಿ ಸಿಗುತ್ತಾ ಲಾರಿ ಚಾಲಕ ಶರವಣನ್​ ನಾಪತ್ತೆ ಆಗಿದ್ದಾರೆ ಎಂದು ಶರವಣನ್ ಮಾವ ಸೆಂದೀಲ್ ಎಂಬುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದ್ದಾರೆ.

Leave A Reply

Your email address will not be published.